ಸ್ನೇಹಿತ್ ಜೊತೆ ಯಾವತ್ತೂ ಮಾತನಾಡಲ್ಲ: ನಮ್ರತಾ ಶಪಥ

Public TV
1 Min Read

ದ್ಯ ಬಿಗ್ ಬಾಸ್ (Bigg Boss Kannada) ಮನೆಯಲ್ಲಿರುವ ನಮ್ರತಾ, ದೊಡ್ಮನೆಯಲ್ಲೇ ಶಪಥವೊಂದನ್ನು ಮಾಡಿದ್ದಾರೆ. ಜೀವನದಲ್ಲಿ ಇನ್ನಾವತ್ತೂ ತಾವು ಸ್ನೇಹಿತ್ (Snehith) ಜೊತೆ ಮಾತನಾಡಲ್ಲ ಎಂದು ಹೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪ್ರಣಯ ಹಕ್ಕಿಗಳು ಎಂದೇ ಖ್ಯಾತರಾಗಿತ್ತು ಸ್ನೇಹಿತ್ ಮತ್ತು ನಮ್ರತಾ (Namrata) ಜೋಡಿ. ಆದರೆ, ಈಗ ವೈರತ್ವ ಬೆಳೆದುಕೊಂಡಿದೆ.

ಸ್ನೇಹಿತ್ ಬಿಗ್ ಬಾಸ್ ಮನೆಯಿಂದ ಹೊರ ಬಂದಾಗ ಕಣ್ಣೀರು ಇಟ್ಟಿದ್ದರು ನಮ್ರತಾ. ಈ ಮನೆಯಲ್ಲಿ ಸ್ನೇಹಿತ್ ನನ್ನು ತುಂಬಾ ಮಿಸ್ ಮಾಡ್ಕೋತಿದ್ದೀನಿ ಅಂತ ಹಲವಾರು ಬಾರಿ ಹೇಳಿದ್ದೂ ಇದೆ. ಇದ್ದಕ್ಕಿದ್ದಂತೆ ಈ ವೈರತ್ವ ಬೆಳೆಯೋಕೆ ಕಾರಣ, ಮೊನ್ನೆ ಸ್ನೇಹಿತ್ ಬಿಗ್ ಬಾಸ್ ಮನೆ ಒಳಗೆ ಹೋಗಿದ್ದರು. ಅಲ್ಲಿ ಅವರ ವಿನಯ್ ಅವರನ್ನು ಬೆಂಬಲಿಸಿದ್ದರು.

ಈ ಬಾರಿ ಬಿಗ್ ಬಾಸ್ ಟೈಟಲ್ ಅನ್ನು ಯಾರು ಗೆಲ್ಲಬೇಕು ಎನ್ನುವ ವಿಚಾರವಾಗಿ ಸ್ನೇಹಿತ್ ಮಾತನಾಡಿದ್ದರು. ನಮ್ರತಾ ಬದಲು ವಿನಯ್ ಅವರು ಗೆಲ್ಲುಬೇಕು ಎಂದು ಹೇಳಿದ್ದರು. ಈ ವಿಚಾರ ನಮ್ರತಾ ಅವರ ಕೋಪಕ್ಕೆ ಕಾರಣವಾಗಿತ್ತು. ಅವತ್ತೆ ಅವರು ಸ್ನೇಹಿತ್ ಜೊತೆ ಜಗಳವನ್ನೂ ಮಾಡಿದ್ದರು.

 

ನಾನು ನಿನಗೆ ಏನೂ ಅಲ್ಲವಾ? ಹಾಗಾದರೆ, ನಾನು ಬಿಗ್ ಬಾಸ್ ಗೆಲ್ಲೋದು ಬೇಡವಾ? ನಿನಗೆ ಇಷ್ಟ ಇಲ್ಲವಾ? ಎಂದು ಹಲವಾರು ಪ್ರಶ್ನೆಗಳನ್ನು ಸ್ನೇಹಿತ್ ಅವರಿಗೆ ಕೇಳಿದ್ದರು ನಮ್ರತಾ. ಇದೀಗ ಮಾತು ಬಿಡುವುದಾಗಿ ಹೇಳಿಕೊಂಡಿದ್ದಾರೆ.

Share This Article