ವಧು ಕಿಡ್ನಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ ಅಂದ ಜಲಜಾ

Public TV
1 Min Read

ನೆಲಮಂಗಲ: ನಗರದ ವಧುವಿನ ಕಿಡ್ನಾಪ್ ಪ್ರಕರಣವು ಬೇರೆ ರೀತಿ ತಿರುವು ಪಡೆದುಕೊಂಡಿದ್ದು, ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ. ನಾನೇ ನನ್ನ ಅಪ್ಪ, ಅಣ್ಣನ ಜೊತೆಗೆ ಬಂದಿದ್ದೇನೆ ಎಂದು ಕಿಡ್ನಾಪ್ ಆದ ನವ ವಧುವೇ ಹೇಳಿಕೊಂಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಜಲಜ, ಗಂಗಾಧರಯ್ಯನ ಜೊತೆ ನಾನು ಮದುವೆಯಾಗಿದ್ದು, ಕೂಡ ಭಯ ಹಾಗೂ ಬಲವಂತದಿಂದಾಗಿದ್ದೇನೆ. ಈ ಹಿಂದೆ ಅವನು ನನ್ನ ಕುಟುಂಬಕ್ಕೆ ಆಸಿಡ್ ಹಾಕಿ ಕೊಲೆ ಮಾಡುವ ಬೆದರಿಕೆ ಹಾಕಿದ್ದನು. ಮದುವೆಯಾಗದಿದ್ದರೆ ನಿಮ್ಮ ಕುಟುಂಬಕ್ಕೆ ಆಸಿಡ್ ಹಾಕುವುದಾಗಿ ಬೆದರಿಕೆ ಒಡ್ಡಿದ್ದನು ಎಂದು ಹೇಳಿದ್ದಾರೆ. ಇದನ್ನೂ ಓದಿ: ದೇಶದ ಒಳಿತಿಗಾಗಿ ಪ್ರಧಾನಿ ಸ್ಥಾನವನ್ನು ತ್ಯಾಗ ಮಾಡಿದವರಿಗೆ ಕೊಡುವ ಬೆಲೆ ಇದೆಯೇ?: ಕೇಂದ್ರ ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ

ಆತ ನನ್ನ ಬಲವಂತವಾಗಿ ಕರೆದುಕೊಂಡು ಹೋಗಿದ್ದನು. ನಂತರದಲ್ಲಿ ಪ್ರತಿ ಗಂಟೆ ಗಂಟೆಗೆ ಜಾಗ ಮನೆ ಬದಲಾವಣೆ ಮಾಡುತಿದ್ದನು. ನನ್ನ ಅಪ್ಪ, ಅಮ್ಮ ಚೆನ್ನಾಗಿರಲಿ ಅನ್ನುವ ಒಂದೇ ಒಂದು ಕಾರಣಕ್ಕೆ ನಾನು ಆತನ ಜೊತೆಗಿದ್ದೇ. ಇಂದು ಮದುವೆಯಾಗಿ ಪೊಲೀಸ್ ಠಾಣೆಗೆ ನಾವು ಬಂದ ವೇಳೆ ವರನು ನನಗೆ ಚಿತ್ರಹಿಂಸೆ ಕೊಡುವ ಬಗ್ಗೆ ನಮ್ಮ ತಂದೆ ಸ್ನೇಹಿತರಿಗೆ ತಿಳಿಸಿದ್ದೇನು. ನನ್ನ ತಂದೆ ಬಂದಾಗ ನಾನೇ ಓಡಿಹೋಗಿ ಕಾರಲ್ಲಿ ಕುಳಿತೆ. ನನ್ನ ಯಾರೂ ಕಿಡ್ನಾಪ್ ಮಾಡಿಲ್ಲ. ಅವರ ಕುಟುಂಬ ಸರಿ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಸಚಿವ ಬಿ.ಸಿ ನಾಗೇಶ್ ಮನೆ ಮೇಲೆ NSUI ದಾಳಿ

ನಾನು ಅವನನ್ನು ನಿಜವಾಗಿಯೂ ಪ್ರೀತಿ ಮಾಡುತ್ತಿದ್ದೆ. ಆದರೆ ಅವನು ಇಂತಹ ಲೋಫರ್ ಅಂತ ನನಗೆ ಗೊತ್ತಿರಲಿಲ್ಲ. ಅವನ ಫೋನ್ ನೋಡಿದ ಮೇಲೆ ಗೊತ್ತಾಯಿತು. ಅವನಿಗೆ ಈ ಮೊದಲು ಇಬ್ಬರು ಮೂವರ ಜೊತೆಗೆ ಸಂಬಂಧ ಇತ್ತು. ಅದನ್ನು ನೋಡಿದ ಮೇಲೆ ಮತ್ತೆ ವರನ ಕುಟುಂಬ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿತ್ತು. ನನ್ನನ್ನು ಕಿಡ್ನಾಪ್ ಮಾಡಲು ಯಾವುದೇ ಗೂಂಡಾಗಳು ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *