ಆನ್‍ಲೋಡ್ ಮಾಡಲು ನಿಂತಿದ್ದ ರೈಲಿನಿಂದ ಮೂಟೆ-ಮೂಟೆ ಈರುಳ್ಳಿ ಹೊತ್ತೊಯ್ದರು!

Public TV
1 Min Read

ಬೆಂಗಳೂರು: ಉಚಿತವಾಗಿ ಯಾವುದೇ ಒಂದು ವಸ್ತು ಸಿಗುತ್ತೆ ಅಂದ್ರೆ ಆ ವಸ್ತು ಯಾವ ಸ್ಥಿತಿಯಲ್ಲಿದೆ ಎಂಬುದನ್ನ ನೋಡದೆ ಮನೆಮಂದಿಗೆಲ್ಲ ಸಾಕಾಗುವಷ್ಟು ಶೇಖರಣೆ ಮಾಡುತ್ತಾರೆ ಜನ. ಇಂತಹುದೇ ಒಂದು ದೃಶ್ಯ ಬೆಂಗಳೂರು ಹೊರವಲಯ ನೆಲಮಂಗಲದ ಬಸವನಹಳ್ಳಿ ಬಳಿ ಶುಕ್ರವಾರ ಕಂಡುಬಂದಿದೆ.

ಬಿಹಾರದಿಂದ ಬೆಂಗಳೂರಿಗೆ 46 ಬೋಗಿಗಳಲ್ಲಿ ಈರುಳ್ಳಿ ಹೊತ್ತು ತಂದಿದ್ದ ಗೂಡ್ಸ್ ರೈಲಿಗೆ ಜನ ಮುತ್ತಿಗೆ ಹಾಕಿದ್ರು. ಅನ್‍ಲೋಡ್ ಮಾಡಲು ನಿಂತಿದ್ದ ರೈಲಿನಲ್ಲಿದ್ದ ಈರುಳ್ಳಿ ಮೂಟೆಗಳನ್ನ ಸೈಕಲ್, ಬೈಕ್, ಆಟೋ, ಕಾರು, ಟ್ರಾಕ್ಟರ್ ಮೂಲಕ ಹೊತ್ತೊಯ್ದಿದ್ದಾರೆ.

ಈ ಈರುಳ್ಳಿ ಮಾರುಕಟ್ಟೆಯಲ್ಲಿ ರಿಜೆಕ್ಟ್ ಆಗಿದ್ದ ಹಿನ್ನೆಲೆಯಲ್ಲಿ ಚೆನ್ನಾಗಿದ್ದ ಈರುಳ್ಳಿಯನ್ನ 90 ಲಾರಿಗಳಲ್ಲಿ ಮಾರುಕಟ್ಟೆಗೆ ರವಾನೆ ಮಾಡಿದ್ದು, ವೇಸ್ಟೆಜಾಗಿ ಉಳಿದ ಈರುಳ್ಳಿಗಾಗಿ ಜನ ಈ ಪರದಾಟ ಪಟ್ಟ ಘಟನೆ ನಡೆದಿದೆ.

https://www.youtube.com/watch?v=LK1uMQr6Gzs

Share This Article
Leave a Comment

Leave a Reply

Your email address will not be published. Required fields are marked *