ಕೊರೊನಾ ಆತಂಕ: ಬೆಂಗ್ಳೂರು ತೊರೆಯುತ್ತಿರುವ ಜನತೆ

Public TV
1 Min Read

ಬೆಂಗಳೂರು: ಕೊರೊನಾ ವೈರಸ್ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಇಂದು ಒಂದೇ ದಿನ ಏಳು ಪ್ರಕರಣಗಳು ಸಹ ಪತ್ತೆಯಾಗಿದ್ದು, ಕೊರೊನಾ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಜನರು ಬೆಂಗಳೂರು ತೊರೆಯುತ್ತಿದ್ದಾರೆ. ಏಕಕಾಲದಲ್ಲಿ ಜನರು ನಗರದಿಂದ ಹೊರ ಹೋಗುತ್ತಿರುವದರಿಂದ ಸಿಟಿ ಹೊರ ವಲಯದ ಟೋಲ್ ಗೇಟ್ ಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.

ಇಂದು ಸಾರಿಗೆ ಮತ್ತು ಖಾಸಗಿ ವಾಹನಗಳು ಬಂದ್ ಆದರೂ ಜನರು ತಮ್ಮ ಸ್ವಂತ ವೆಹಿಕಲ್ ಗಳಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಜಾಸ್ ಟೋಲ್ ಬಳಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಕಿಲೋಮೀಟರ್ ದೂರ ಟ್ರಾಫಿಕ್ ಜಾಮ್ ಸಂಭವಿಸಿದೆ. ಸರ್ಕಾರ ಸಾರಿಗೆ ವ್ಯವಸ್ಥೆಯನ್ನ ಬಂದ್ ಮಾಡಿದೆ ಹಿನ್ನೆಲೆಯಲ್ಲಿ ತಮ್ಮ ತಮ್ಮ ಕಾರು, ಬೈಕ್ ಗಳಲ್ಲಿ ತಮ್ಮ ಊರುಗಳನ್ನು ತಲುಪುತ್ತಿದ್ದಾರೆ.

ಇಂದು ಮಧ್ಯರಾತ್ರಿಯಿಂದಲೇ ಬೆಂಗಳೂರು ಲಾಕ್‍ಡೌನ್ ಆಗಿದೆ. ಹಾಗಾಗಿ ಜನರು ಇಂದು ಮಧ್ಯಾಹ್ನದಿಂದಲೇ ಬೆಂಗಳೂರಿಗೆ ಬೈ ಹೇಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *