ಕೊರೊನಾ ಭೀತಿಗೆ 21 ಸಾವಿರ ಕೋಳಿಗಳ ಜೀವಂತ ಸಮಾಧಿ

Public TV
1 Min Read

ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕರ್ನಾಟಕ ಒಂದು ವಾರ ಸ್ತಬ್ಧವಾಗಿದೆ. ಆದರೆ ಇದರಿಂದ ಆತಂಕಕ್ಕೆ ಒಳಗಾಗಿರುವ ರೈತರಿಬ್ಬರು ಭಯಗೊಂಡು ಸಾಮೂಹಿಕವಾಗಿ ಕೋಳಿಗಳ ಮಾರಣಹೋಮ ಮಾಡಿರುವ ಘಟನೆ ನಡೆದಿದೆ.

ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಕುಪ್ಪೇಮಳ ಹಾಗೂ ಎಣ್ಣೆಗೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಸುಮಾರು 21,000 ಕೋಳಿಗಳ ಜೀವಂತ ಸಮಾಧಿ ಆಗಿವೆ. ರೈತ ವೆಂಕಟರಾಮಯ್ಯ ಹಾಗೂ ರಘು ಅವರಿಗೆ ಈ ಕೋಳಿಗಳು ಸೇರಿದ್ದು, ಕೊರೊನಾ ಭೀತಿಯಿಂದ ಮೂಟೆಕಟ್ಟಿ ಗುಂಡಿಯಲ್ಲಿ ಮುಚ್ಚಿದ್ದಾರೆ.

ಭಯದಿಂದ ಜೆಸಿಬಿ ಯಂತ್ರದ ಮೂಲಕ ಗುಂಡಿ ತಗೆದು ಕೋಳಿಗಳ ಜೀವಂತ ಸಮಾಧಿ ಮಾಡಿದ್ದಾರೆ. ಲಕ್ಷ ಲಕ್ಷ ಹಣ ಸಾಲ ಮಾಡಿ ಕೋಳಿ ಸಾಕಾಣಿಕೆ ಮಾಡುತ್ತಿದ್ದ ರೈತ ಕಂಗಾಲಾಗಿದ್ದು, ಕೊರೊನಾ ಭೀತಿಯಿಂದ ಹಾಗೂ ಕೋಳಿ ಬೆಲೆ ಸಹ ಕಡಿಮೆಯಾಗಿರುವ ಶಂಕೆ ಸಹ ವ್ಯಕ್ತವಾಗುತ್ತಿದೆ.

ಕೋಳಿಯನ್ನು ತಿನ್ನಲು ಜನರು ಹೆದರುತ್ತಿದ್ದಾರೆ. ಹೀಗಾಗಿ ನೆಲಮಂಗಲ ತಾಲೂಕಿನಲ್ಲಿ ಬಹುತೇಕ ಅಂಗಡಿಗಳು ಬಂದ್ ಆಗುವ ನಿಟ್ಟಿನಲ್ಲಿ ಇತ್ತ ಅಂಗಡಿಗಳ ಕಡೆ ಜನರು ಬಾರದ ಹಿನ್ನೆಲೆ ಮುಂದಾಗುವ ಬೆಲೆ ಕುಸಿತವನ್ನು ತಡೆಗಟ್ಟಲು ಹೀಗೆ ಮಾಡುತ್ತಿರುವುದಾಗಿ ಕೋಳಿ ಸಾಕಾಣಿಕೆ ಮಾಡಿದ ರೈತರು ಆತಂಕ ವ್ಯಕ್ತಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *