NCERT 8ನೇ ತರಗತಿ ಪಠ್ಯಪುಸ್ತಕ ಪರಿಷ್ಕರಣೆ – ದೆಹಲಿ ಸುಲ್ತಾನರ ಕ್ರೌರ್ಯ, ಮೊಘಲರ ಅಸಹಿಷ್ಣುತೆ ಉಲ್ಲೇಖ

Public TV
1 Min Read

ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ NCERT ತನ್ನ 8ನೇ ತರಗತಿ ಇತಿಹಾಸ ಪಠ್ಯಪುಸ್ತಕವನ್ನು ಪರಿಷ್ಕರಿಸಿದ್ದು, ದೆಹಲಿ ಸುಲ್ತಾನರ (Delhi Sultanate) ಕ್ರೌರ್ಯ ಮತ್ತು ಮೊಘಲರ ಧಾರ್ಮಿಕ ಅಸಹಿಷ್ಣುತೆಯನ್ನು ಒತ್ತಿಹೇಳುವ ಹೊಸ ವಿಷಯ ಸೇರಿಸಿದೆ.

ಈ ಪರಿಷ್ಕರಣೆಯಿಂದ ಉಂಟಾಗಬಹುದಾದ ವಿವಾದವನ್ನು ತಡೆಯಲು ಒಂದು ಡಿಸ್ಕ್ಲೈಮರ್‌ನೊಂದಿಗೆ ಹೊರಡಿಸಿದ್ದು, ಇದರಲ್ಲಿ ಇತಿಹಾಸದ ವಿವರಣೆಯು ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ರೂಪಿತವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ. ಇದನ್ನೂ ಓದಿ: ಬೆಂಕಿ ಹಚ್ಚಿಕೊಂಡು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್‌ – ಒಡಿಶಾ ವಿಧಾನಸೌಧ ಬಳಿ ಭುಗಿಲೆದ್ದ ಆಕ್ರೋಶ

ಪರಿಷ್ಕೃತ ಪಠ್ಯಪುಸ್ತಕವು ದೆಹಲಿ ಸುಲ್ತಾನರ ಆಡಳಿತ (1206-1526) ಮತ್ತು ಮೊಘಲ್ ಸಾಮ್ರಾಜ್ಯದ (1526-1857) ಕಾಲಘಟ್ಟದಲ್ಲಿ (Mughal Periods) ಕಂಡುಬಂದ ಧಾರ್ಮಿಕ ಅಸಹಿಷ್ಣುತೆಯ ಕೆಲವು ಘಟನೆಗಳನ್ನು ಒಳಗೊಂಡಿದೆ. ಹೊಸ ಪಠ್ಯಪುಸ್ತಕದಲ್ಲಿ ಮೊಘಲ್ ಸಾಮ್ರಾಜ್ಯದ ಸಂಸ್ಥಾಪಕ ಬಾಬರ್‌ನನ್ನು ʻಕ್ರೂರ ವಿಜಯಶಾಲಿʼಅಂತ ವರ್ಣಿಸಿದ್ರೆ, ಅಕ್ಬರ್‌ನನ್ನು ʻಕ್ರೌರ್ಯ ಮತ್ತು ಸಹಿಷ್ಣತೆಯ ಏಕರೂಪʼ, ಔರಂಗಜೇಬ್ ತನ್ನ ಆಳ್ವಿಕೆಯಲ್ಲಿ ʻದೇವಾಲಯಗಳು ಮತ್ತು ಗುರುದ್ವಾರಗಳನ್ನು ಕೆಡವಿದ್ದಕ್ಕೆʼ ಹೆಸರುವಾಸಿಯಾಗಿದ್ದಾನೆ ಎಂದು ಉಲ್ಲೇಖಿಸಲಾಗಿದೆ.

NCERT ಈ ವಿಷಯವನ್ನು ಮಂಡಿಸಲು ಪ್ರಯತ್ನಿಸಿದೆ ಎಂದು ಹೇಳಿಕೊಂಡಿದ್ದು, ಡಿಸ್ಕ್ಲೈಮರ್‌ನಲ್ಲಿ ಈ ವಿವರಣೆಯು ಯಾವುದೇ ಸಮುದಾಯವನ್ನು ಗುರಿಯಾಗಿಸುವ ಉದ್ದೇಶವನ್ನು ಹೊಂದಿಲ್ಲ ಎಂದು ಒತ್ತಿಹೇಳಿದೆ. ಇದನ್ನೂ ಓದಿ: ಹೆಣ್ಣು ಅಂತ 7 ವರ್ಷದ ಮಗಳನ್ನು ಕಾಲುವೆಗೆ ತಳ್ಳಿ ಕೊಂದ ಪಾಪಿ ತಂದೆ

Share This Article