ಧರ್ಮದ ಅಫೀಮು ತಿಂದು ಅಮಲಿನಲ್ಲಿ ತೇಲಾಡುತ್ತಿರೋ ಬಿಜೆಪಿಗರು ನಿಜವಾದ ಡ್ರಗ್ಗಿಸ್ಟ್‌ಗಳು: ಶ್ರೀನಿವಾಸ್ ಬಿ.ವಿ

Public TV
1 Min Read

– ಕಟೀಲಿನಂತಹ ಪವಿತ್ರ ಕ್ಷೇತ್ರದಿಂದ ಬಂದು ಅಪವಿತ್ರ ಮಾತು

ನವದೆಹಲಿ: ಧರ್ಮದ ಅಫೀಮು ತಿಂದು ಅಮಲಿನಲ್ಲಿ ತೇಲಾಡುತ್ತಿರುವ ಬಿಜೆಪಿಗರು ನಿಜವಾದ ಡ್ರಗ್ಗಿಸ್ಟ್‌ಗಳು ಎಂದು ರಾಷ್ಟ್ರೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಬಿ.ವಿ ವಾಗ್ದಾಳಿ ನಡೆಸಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಹೇಳಿಕೆಗೆ ತಿರುಗೇಟು ನೀಡಿದರು. ಕಟೀಲಿನಂತಹ ಪವಿತ್ರ ಕ್ಷೇತ್ರದಿಂದ ಬಂದು ನಳಿನ್ ಕುಮಾರ್ ಅಪವಿತ್ರ ಮಾತುಗಳನ್ನಾಡುತ್ತಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿರುವುದು ಖಂಡನೀಯ, ನಿಜವಾದ ಡ್ರಗ್ಗಿಸ್ಟ್ ಗಳು ಬಿಜೆಪಿಯವರು, ಸಂಘ ಪರಿವಾರದವರು. ಇನ್ನೊಮ್ಮೆ ಮಾತನಾಡುವಾಗ ನಳಿನ್ ಕುಮಾರ್ ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ನಳಿನ್ ಕುಮಾರ್ ಕಟೀಲ್ ಒಬ್ಬ ಅವಿವೇಕಿ, ಮಾನಸಿಕ ಅಸ್ವಸ್ಥ: ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಬಹಳಷ್ಟು ಸಮಸ್ಯೆಗಳಿದೆ. ನಿರುದ್ಯೋಗ ಹೆಚ್ಚಾಗಿದೆ. ಅತ್ಯಾಚಾರಗಳು ನಡೆಯುತ್ತಿವೆ. ಇದೆಲ್ಲದರ ಬಗ್ಗೆ ಮಾತನಾಡಬೇಕಿರುವ ಬಿಜೆಪಿ ಅಧ್ಯಕ್ಷರು ಜನರ ದಾರಿ ತಪ್ಪಿಸಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಇಡೀ ದೇಶದಲ್ಲಿರುವ ಬಿಜೆಪಿ ಅಧ್ಯಕ್ಷರ ಪೈಕಿ ನಳಿನ್ ಕುಮಾರ್ ಕಟೀಲ್ ವ್ಯರ್ಥ ಅಧ್ಯಕ್ಷ ಎಂದು ಟೀಕಿಸಿದರು. ಇದನ್ನೂ ಓದಿ: ಆರ್‌ಎಸ್‌ಎಸ್‌ ಕಲಿಸಿಕೊಟ್ಟಿರೋದೇ ನೀಲಿಚಿತ್ರ ನೋಡೋದು: ಹೆಚ್‍ಡಿಕೆ

ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ನಿಜವಾಗಿ ಮಾನ ಮರ್ಯಾದೆ ಇದ್ದರೆ ನಳಿನ್ ಕುಮಾರ್ ಕಟೀಲ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ನಾವು ನಿಮ್ಹಾನ್ಸ್ ನಲ್ಲಿಟ್ಟು ಅವರ ತಲೆ ಸರಿ ಮಾಡುತ್ತೇವೆ ಎಂದು ಕಿಡಿಕಾರಿದರು. ಅಲ್ಲದೇ ಕಾನೂನು ಹೋರಾಟದ ಎಚ್ಚರಿಕೆಯನ್ನೂ ಶ್ರೀನಿವಾಸ್ ನೀಡಿದ್ದಾರೆ.  ಇದನ್ನು ಓದಿ: ಶೇ.40 ರಷ್ಟು ಮಹಿಳೆಯರಿಗೆ ಟಿಕೆಟ್ – ಯುಪಿಯಲ್ಲಿ ಪ್ರಿಯಾಂಕಾ ಗಾಂಧಿ ಕ್ರಾಂತಿಕಾರಿ ನಿರ್ಧಾರ

Share This Article
Leave a Comment

Leave a Reply

Your email address will not be published. Required fields are marked *