ತಾಲಿಬಾನ್ ಸರ್ಕಾರ ರಚನೆಗೆ ಸಂತೋಷ ವ್ಯಕ್ತಪಡಿಸೋದು ಅನಾಗರೀಕತೆ: ನಾಸಿರುದ್ದೀನ್ ಶಾ

Public TV
1 Min Read

ಮುಂಬೈ: ಬಾಲಿವುಡ್ ಹಿರಿಯ ನಟ ನಾಸಿರುದ್ದೀನ್ ಶಾ ತಾಲಿಬಾನ್ ವಿಚಾರದಲ್ಲಿ ಮುಸ್ಲಿಂರ ಅನಾಗರಿಕ ವರ್ತನೆಯಿಂದ ಬೇಸರಗೊಂಡಿದ್ದು, ದೇವರೆ ಬಂದರು ಜಗತ್ತನ್ನು ಗುರುತಿಸಲು ಸಾಧ್ಯವಾಗದಷ್ಟು ಬದಲಾಗಿದ್ದೀರಾ ಎಂದು ಬೇಸರಗೊಂಡು ಸೋಶಿಯಲ್ ಮೀಡಿಯಾದಲ್ಲಿ ವೀಡಿಯಾವನ್ನು ಟ್ವೀಟ್ ಮಾಡಿದ್ದಾರೆ.

ಅಫ್ಘಾನ್ ನಲ್ಲಿ ಮತ್ತೆ ತಾಲಿಬಾನ್ ಉಗ್ರರ ಸರ್ಕಾರ ಮರಳಿದೆ ಎಂಬ ಕಾರಣಕ್ಕೆ ಭಾರತದಲ್ಲಿರುವ ಕೆಲವು ಮುಸ್ಲಿಂ ಮಂದಿ ಖುಷಿಯಿಂದ ಅನಾಗರಿಕರಾಗಿ ವರ್ತಿಸುತ್ತಿದ್ದಾರೆ. ಇದರಿಂದ ಬೇಸರಕೊಂಡ ನಾಸಿರುದ್ದೀನ್ ಟ್ವಿಟ್ಟರ್ ನಲ್ಲಿ, ಅಫ್ಘಾನ್ ನಲ್ಲಿ ಮತ್ತೆ ತಾಲಿಬಾನ್‍ಗಳ ಉಗ್ರರಿಗೆ ಅಧಿಕಾರ ಸಿಕ್ಕಿರುವುದು ಇಡೀ ಜಗತ್ತು ದುಖಃ ಪಡುವಂತಹ ವಿಷಯವಾಗಿದೆ. ಆದರೆ ಇಲ್ಲಿ ಕೆಲವು ಭಾರತೀಯ ಮುಸ್ಲಿಮರು ಸಂತೋಷ ವ್ಯಕ್ತಪಡಿಸುತ್ತಿರುವುದು ಅವರ ಅನಾಗರೀಕತೆಯನ್ನು ತೋರಿಸುತ್ತೆ. ಒಂದು ವೇಳೆ ನಿಮ್ಮ ಈ ನಡವಳಿಕೆಯಿಂದ ದೇವರೇ ಬಂದರು ಜಗತ್ತನ್ನು ಗುರುತಿಸಲು ಸಾಧ್ಯವಾಗದಷ್ಟು ಬದಲಾಗಿದ್ದೀರಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇನ್‍ ಸ್ಟಾ ಫಾಲೋವರ್ಸ್ – ಯಾರಿಗೆ ಎಷ್ಟು ಮಂದಿ ಅಭಿಮಾನಿಗಳಿದ್ದಾರೆ?

ಕೆಲವು ಭಾರತೀಯ ಮುಸ್ಲಿಮರು ಈ ಕುರಿತು ಸಂಭ್ರಮವನ್ನು ಆಚರಿಸುತ್ತಿರುವಿರಲ್ಲ ನಿಮಗೆ ನಾಗರಿಕತೆ ಇದೆಯಾ ಎಂದು ಪ್ರಶ್ನೆಸಿದ್ದಾರೆ. ನಾವು ‘ಹಿಂದುಸ್ತಾನಿ ಇಸ್ಲಾಂ’ರು ಎಂದು ಕರೆದಿದ್ದು, ಈ ಆಚರಣೆ ನಮ್ಮ ಭಾರತದಲ್ಲಿ ಮಾತ್ರ ಸಾಧ್ಯ. ಇದನ್ನು ಪ್ರಪಂಚದ ಇತರ ಭಾಗಗಳಲ್ಲಿ ಆಚರಣೆ ಮಾಡುವುದಿಲ್ಲ. ಅವರ ಆಚರಣೆಗೂ ನಮಗು ತುಂಬಾ ವ್ಯತ್ಯಾಸವಿದೆ. ಭಾರತೀಯ ಇಸ್ಲಾಂ ಯಾವಾಗಲೂ ಪ್ರಪಂಚದಾದ್ಯಂತ ಇಸ್ಲಾಂ ಧರ್ಮಕ್ಕಿಂತ ಭಿನ್ನವಾಗಿದೆ ಎಂದು ಹೇಳಿ ಅದನ್ನು ಟ್ವೇಟ್ ಮಾಡಿದ್ದಾರೆ. ಇದನ್ನೂ ಓದಿ: ಮದುವೆ ಮನೆಗೆ ಹೋಗಿ ಪ್ರಾಣಕ್ಕೆ ಆಪತ್ತು ತಂದುಕೊಂಡ 100ಕ್ಕೂ ಹೆಚ್ಚು ಜನರು

Share This Article
Leave a Comment

Leave a Reply

Your email address will not be published. Required fields are marked *