ಕನ್ನಡ ರಾಜ್ಯೋತ್ಸವಕ್ಕೆ ತೆರಳಿದ್ದ ಬಾಲಕ ನರಗುಂದ ಬೆಟ್ಟದಿಂದ ಬಿದ್ದು ಸಾವು

Public TV
1 Min Read

ಗದಗ: ಐತಿಹಾಸಿಕ ಬೆಟ್ಟದಿಂದ ಬಾಲಕನೊಬ್ಬ ಬಿದ್ದು ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಕುರುಬರ ಹೊಣಿಯ ಹತ್ತು ವರ್ಷ ವಯಸ್ಸಿನ ಮಲ್ಲಪ್ಪ ಗಡೇಕರ್ ಮೃತಪಟ್ಟ ಬಾಲಕ. ಬೆಟ್ಟದ ತುದಿಯಲ್ಲಿರುವ ದೇವಾಲಯದ ಬಳಿ ಪ್ರತಿ ವರ್ಷವು ಸ್ವಾತಂತ್ರ್ಯ ದಿನಾಚರಣೆ ಹಾಗೂ ಕನ್ನಡ ರಾಜೋತ್ಸವ ಸಂದರ್ಭದಲ್ಲಿ ಬಾವುಟ ಹಾರಿಸಲಾಗುತ್ತಿತ್ತು. ಅದೇ ರೀತಿ ಈ ವರ್ಷವು ಬಾವುಟವನ್ನು ಹಾರಿಸಲಾಗಿದೆ.

ಬಾವುಟ ಹಾರುವುದನ್ನು ನೋಡಲು ತನ್ನ ಗೆಳೆಯರೊಂದಿಗೆ ಮಲ್ಲಪ್ಪ ಸ್ಥಳಕ್ಕೆ ಬಂದಿದ್ದ. ಈ ಸಮಯದಲ್ಲಿ ಸೀತಾಫಲ ಹಣ್ಣು ಕೀಳಲು ತೆರಳಿದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ.

ಘಟನೆ ಕುರಿತು ಗದಗ ಜಿಲ್ಲೆ ಸರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *