ಬಾಲಯ್ಯಗೆ ‘ಅಖಂಡ’ ಚಿತ್ರದ ನಿರ್ದೇಶಕ ಆ್ಯಕ್ಷನ್ ಕಟ್

Public TV
1 Min Read

ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ (Nandamuri Balakrishna) ಮುಂದಿನ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. 2021ರಲ್ಲಿ ‘ಅಖಂಡ’ ಸಿನಿಮಾ ಸಕ್ಸಸ್ ಕೊಟ್ಟ ನಿರ್ದೇಶಕನ ಜೊತೆ ಬಾಲಯ್ಯ ಮತ್ತೊಮ್ಮೆ ಕೈಜೋಡಿಸುತ್ತಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

 

ಜೂನ್‌ 10ರಂದು ಬೋಯಪತಿ ಶ್ರೀನು (Boyapati Srinu) ಮತ್ತು ಬಾಲಯ್ಯ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡುವ ಬಗ್ಗೆ ಚಿತ್ರತಂಡ ತಿಳಿಸಿದೆ. ಮತ್ತೆ ಆ್ಯಕ್ಷನ್ ಸಿನಿಮಾ ತೋರಿಸೋಕೆ ರೆಡಿಯಾಗಿದ್ದಾರೆ. ಸದ್ಯದಲ್ಲೇ ಶೂಟಿಂಗ್‌ ಕೂಡ ಶುರುವಾಗಲಿದೆ. ಇದನ್ನೂ ಓದಿ:ಉಮಾಪತಿ ಜೊತೆ ಐಶ್ವರ್ಯಾ ಸರ್ಜಾ ಅದ್ಧೂರಿ ಮದುವೆ

ಇನ್ನೂ 2021ರಲ್ಲಿ ಬಾಲಯ್ಯ ನಟಿಸಿದ ‘ಅಖಂಡ’ ಸಿನಿಮಾಗೆ ಬೋಯಪತಿ ಶ್ರೀನು ನಿರ್ದೇಶನ ಮಾಡಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಇದೇ ಟೀಮ್ ಮತ್ತೆ ಜೊತೆಯಾಗಿ ಕೆಲಸ ಮಾಡಲು ಮಂದಾಗಿರೋದಕ್ಕೆ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಅಂದಹಾಗೆ, ಇದೊಂದೇ ಸಿನಿಮಾ ಅಲ್ಲ ಹಲವು ಸಿನಿಮಾಗಳನ್ನು ಬಾಲಯ್ಯ ಒಪ್ಪಿಕೊಂಡಿದ್ದಾರೆ. ರಾಜಕೀಯದ ಜೊತೆ ನಟನೆಯಲ್ಲೂ ಅವರು ಬ್ಯುಸಿಯಾಗಿದ್ದಾರೆ. ನಟನ ಸಿನಿಮಾಗಾಗಿ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

Share This Article