ಉದ್ಯಮಿ ಮನೆಗೆ ದಿಢೀರ್ ಭೇಟಿ ನೀಡಿ ವಿಶೇಷ ಆಶೀರ್ವಾದ ನೀಡಿದ ನಾಗಾಸಾಧು!

Public TV
1 Min Read

ಚಿತ್ರದುರ್ಗ: ಇತ್ತೀಚೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಮನೆಗೆ ಭೇಟಿ ಕೊಟ್ಟಿದ್ದ ಸಾಧುಗಳಲ್ಲಿ ಓರ್ವ ಚಿತ್ರದುರ್ಗಕ್ಕೆ ದಿಢೀರ್ ಭೇಟಿ ನೀಡಿದ್ದಾರೆ.

ದೆಹಲಿ ನೋಂದಣಿಯುಳ್ಳ ಕೆಂಪು ಕಾರಿನಲ್ಲಿ ಬಂದಿದ್ದ ನಾಗಸಾಧು ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಮುತ್ತುಗದೂರು ಗ್ರಾಮಕ್ಕೆ ಭೇಟಿ ನೀಡಿದ್ದರು. ಆ ವೇಳೆ ನಾಗಸಾಧುವನ್ನು ಗ್ರಾಮಸ್ಥರು ಕುತೂಹಲದಿಂದ ರಸ್ತೆ ಬದಿಯಲ್ಲಿ ವೀಕ್ಷಿಸುತ್ತಿದ್ದರು. ಆಗ ಅಲ್ಲಿಗೆ ಆಗಮಿಸಿದ ಉದ್ಯಮಿ ಸಿದ್ದೇಶ್ ಅವರನ್ನು ನಾಗಸಾಧುಗಳೇ ಮಾತನಾಡಿಸಿ, ತಮ್ಮ ಮನೆಗೆ ತಾವು ಆಹ್ವಾನಿಸಿದರೆ ಭೇಟಿ ನೀಡಿ ಆಶೀರ್ವದಿಸಿ ಮುಂದೆ ಸಾಗುವುದಾಗಿ ಹೇಳಿದರು.

ಉದ್ಯಮಿ ಸಿದ್ದೇಶ್ ಮನೆಯಲ್ಲಿ ಚಹಾ ಸೇವಿಸಿದ ನಾಗ ಸಾಧು ಮುಂಬರುವ ದಿನಗಳಲ್ಲಿ ಈ ಮನೆಯ ಯಜಮಾನರಾಗಿರೊ ಸಿದ್ದೇಶ್ ಶಾಸಕರಾಗುವ ಭಾಗ್ಯವಿದೆ ಅಂತ ಹೇಳಿದ್ದಾರೆ. ನಂತರ ಸಿದ್ದೇಶ್ ಕುಟುಂಬದ ಸದಸ್ಯರೆಲ್ಲರನ್ನು ಆಶೀರ್ವದಿಸಿ ಮುಂದೆ ನಡೆದ್ರು. ಈ ವೇಳೆ ನಾಗಸಾಧು ಭೇಟಿ ಹಾಗು ಹೇಳಿಕೆ ಚಿತ್ರದುರ್ಗ ಜಿಲ್ಲೆಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಇನ್ನು ಮನೆಗೆ ಆಹ್ವಾನಿಸಿದರೂ ಕೆಲವೊಮ್ಮೆ ಬಾರದ ನಾಗಸಾಧುಗಳು, ದಿಢೀರ್ ಮನೆಗೆ ಬಂದಿದ್ದರಿಂದ ತೀವ್ರ ಸಂತಸ ಹಾಗು ಆಶ್ಚರ್ಯ ಕುಟುಂಬಸ್ಥರಿಂದ ವ್ಯಕ್ತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *