ನಾಗರ ಪಂಚಮಿ ವಿಶೇಷ: ಸಗಣಿ ಎರಚಿ ಆಟ ಆಡ್ತಾರೆ ಗದಗ ಜನ!

Public TV
1 Min Read

ಗದಗ: ಈಗಿನ ಕಾಲದಲ್ಲಿ ಜಾನುವಾರುಗಳ ಸಗಣಿ ಅಂದ್ರೆ ಜನ ದೂರ ಸರಿಯುವವರೇ ಹೆಚ್ಚು ಜನ. ಆದರೆ ಮುದ್ರಣ ನಗರಿ ಎಂದು ಹೆಸರುವಾಸಿಯಾದ ಗದಗದಲ್ಲಿ ಮಾತ್ರ ಒಬ್ಬರಿಗೊಬ್ಬರು ಪರಸ್ಪರ ಸಗಣಿಯನ್ನ ಮೈಮೇಲೆ ಎರಚುವ ಆಟ ಆಡುತ್ತಾರೆ.

ಹೌದು, ನಗರದ ಕುಂಬಾರ ಓಣಿಯಲ್ಲಿ ಸಗಣಿ ಎರಚಾಡುವುದು ತುಂಬಾನೆ ವಿಶಿಷ್ಠವಾಗಿದೆ. ನಾಗರ ಪಂಚಮಿ ಹಬ್ಬವನ್ನು ಬೇರೆ ಬೇರೆ ಪ್ರದೇಶದಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತಾರೆ. ಆ ಈ ಓಣಿಯಲ್ಲಿ ನಾಗರ ಪಂಚಮಿ ಕರೆಕಟಾಂಬ್ಲೆ ದಿನ ಪರಸ್ಪರ ಸಗಣಿ ಎರಚಿಕೊಂಡು ಸಂಭ್ರಮಿಸಿ ಹಬ್ಬ ಆಚರಿಸುತ್ತಾರೆ.

ಇದು ನೂರಾರು ವರ್ಷದಿಂದ ನಡೆದು ಬಂದ ಪದ್ಧತಿಯಾಗಿದ್ದು, ಈ ನಾಡಿಗೆ ಸಂಪೂರ್ಣ ಮಳೆಯಾಗಲಿ, ಚೆನ್ನಾಗಿ ಬೆಳೆ ಬರಲಿ ಎಂಬ ಉದ್ದೇಶದಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಜೊತೆಗೆ ಈ ಸಗಣಿ ಆಟ ಆಡುವುದರಿಂದ ಯಾವುದೇ ರೀತಿಯ ಚರ್ಮರೋಗ ಬರುವದಿಲ್ಲ ಎಂದು ಇಲ್ಲಿಯ ಜನ ಹೇಳುತ್ತಿದ್ದಾರೆ.

ಸುಮಾರು ಒಂದು ವಾರಗಳಿಂದ ಗೌಳಿಯವರ ಮನೆಯಲ್ಲಿ ಸಗಣಿ ಸಂಗ್ರಹಿಸಿ ಇಡುತ್ತಾರೆ. ಅದನ್ನು ತಂದು ರಸ್ತೆಗೆ ಹಾಕಿ ಅದಕ್ಕೆ ಸುಣ್ಣ, ಬಣ್ಣ, ಕುಂಕುಮ ಹಾಕಿ ಪೂಜೆ ಮಾಡುತ್ತಾರೆ. ಇಲ್ಲಿಯ ಪುರುಷರು ಮಹಿಳೆಯರ ವೇಷಧಾರಿಯಾಗಿರುತ್ತಾರೆ. ಹೀಗೆ ನಾನಾ ರೀತಿಯ ಹಾರಗಳನ್ನ ಕೊರಳಲ್ಲಿ ಹಾಕಿಕೊಂಡು ಮೈಮೇಲೆ ಸಗಣಿ ಎರಚಿ ಸಂಭ್ರಮಿಸುತ್ತಾರೆ.

ಈ ಹಬ್ಬಕ್ಕೆ ಧಾರ್ಮಿಕ ಆಚರಣೆಯೊಂದಿಗೆ ವೈಜ್ಞಾನಿಕ ಹಿನ್ನೆಲೆಯೂ ಸಹ ಇದೆ. ಈ ಹಬ್ಬ ಆಚರಿಸುವುದರಿಂದ ಉತ್ತಮ ಮಳೆ ಬೆಳೆಯಾಗುತ್ತೆ ಎಂಬ ನಂಬಿಕೆ ಇದೆ. ಈ ಮೋಜಿನ ಸಗಣಿ ಹಬ್ಬದ ಆಟ ನೋಡಲೆಂದೇ ದೂರದ ಊರಿನಿಂದ ಜನ ಬರುತ್ತಾರೆ.

ಸಗಣಿ ಎರಚಾಟದಲ್ಲಿ ಯುವಕರು ಮಗ್ನರಾಗಿ ಸಂತೋಷ ಅನುಭವಿಸುತ್ತಿದ್ದರೆ, ಸ್ಥಳದಲ್ಲಿ ಸಾವಿರಾರು ಜನ ನೋಡುತ್ತಾ ಖುಷಿಪಡುತ್ತಾರೆ. ಈ ನಾಗರ ಪಂಚಮಿ ಕರಿಕಟಾಂಬ್ಲಿ ದಿನದ ಹಬ್ಬದಲ್ಲಿ ಯಾವುದೇ ಜಾತಿ ಭೇದವಿಲ್ಲದೆ ಈ ಸಗಣಿ ಹಬ್ಬ ಸಂಭ್ರಮಿಸುತ್ತಾರೆ. ಸುಮಾರು ಮೂರು-ನಾಲ್ಕು ಗಂಟೆಗಳ ಕಾಲ ನಡೆಯುವ ಈ ಆಟ ಎಲ್ಲರಿಗೂ ಸಂತೋಷ ನೀಡುತ್ತದೆ.

Share This Article
Leave a Comment

Leave a Reply

Your email address will not be published. Required fields are marked *