ಹುಣಸೂರು ದರೋಡೆ ಕೇಸ್‌ – ಹಿಂದಿ ಮಾತನಾಡ್ತಿದ್ದ, ಕೈಯಲ್ಲಿ ಗನ್‌ ಹಿಡಿದಿದ್ದ: ಎಸ್ಪಿ ವಿಷ್ಣುವರ್ಧನ್

1 Min Read

– ತನಿಖೆಗೆ 5 ವಿಶೇಷ ತಂಡ ರಚನೆ

ಮೈಸೂರು: ಜಿಲ್ಲೆಯ ಹುಣಸೂರು (Hunsur) ಪಟ್ಟಣದ ಸ್ಕೈ ಗೋಲ್ಡ್ & ಡೈಮಂಡ್ಸ್‌ ಅಂಗಡಿಯಲ್ಲಿ ಮಟಮಟ ಮಧ್ಯಾಹ್ನವೇ ದರೋಡೆ ನಡೆದಿದೆ. ದರೋಡೆ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ʻಪಬ್ಲಿಕ್ ಟಿವಿʼ ಜೊತೆ ವಿವರವಾಗಿ ಮಾತನಾಡಿದ್ದಾರೆ.

5 ಜನರಿಂದ ದರೋಡೆ (Robbery) ನಡೆದಿದೆ. ಗನ್ ತೋರಿಸಿ ದರೋಡೆ ಮಾಡಿದ್ದು ಇಬ್ಬರು ಮುಖ ಮುಚ್ಚಿಕೊಂಡಿದ್ದಾರೆ. ಮತ್ತೆ ಮೂವರು ಮುಖ ಮುಚ್ಚಿಕೊಂಡಿಲ್ಲ. ಎಷ್ಟು ಪ್ರಮಾಣದ ಚಿನ್ನಾಭರಣ ದೋಚಿದ್ದಾರೆ ಎಂಬ ಮಾಹಿತಿ ಇನ್ನೂ ಲಭ್ಯವಿಲ್ಲ. ತನಿಖೆಗೆ ಐದು ತಂಡ ರಚನೆ ಮಾಡಿದ್ದೇವೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: 2 ಹೆಜ್ಜೆ ಮುಂದಿಟ್ಟಿದ್ದರೆ ನಾನು ಇವತ್ತು ಬದುಕಿರುತ್ತಿರಲಿಲ್ಲ.. ನನ್ನ ಮುಂದೆ ದೇಹದ ಭಾಗ ಬಿದ್ದಿತ್ತು: ಮೈಸೂರು ಸ್ಫೋಟ ಬಗ್ಗೆ ಪ್ರತ್ಯಕ್ಷದರ್ಶಿ ಮಾತು

ದ್ವಿಚಕ್ರ ವಾಹನದಲ್ಲಿ ಬಂದಿದ್ದ ದರೋಡೆಕೋರರು, ಹಿಂದಿ ಮಾತಾಡುತ್ತಿದ್ದರು. ಎಲ್ಲರ ಕೈಯಲ್ಲೂ ಗನ್ ಇದ್ವು ಎಂದು ಹೇಳಿದ್ದಾರೆ. ಸದ್ಯ ತನಿಖೆ ಪ್ರಗತಿಯಲ್ಲಿದೆ. ಇದನ್ನೂ ಓದಿ: ಮೈಸೂರು | ಹುಣಸೂರಿನಲ್ಲಿ ಹಾಡಹಗಲೇ ಗನ್‌ ತೋರಿಸಿ ಚಿನ್ನದಂಗಡಿ ದರೋಡೆ

ಮಟ ಮಟ ಮಧ್ಯಾಹ್ನ ಏನಾಯ್ತು?
ರಾಜ್ಯದಲ್ಲಿ ಬ್ಯಾಂಕ್‌ಗಳು, ಎಟಿಎಂಗಳ ಬಳಿಕ ಇದೀಗ ಜ್ಯುವೆಲ್ಲರಿ ಶಾಪ್‌ಗಳ ದರೋಡೆ ಶುರುವಾಗಿದೆ. ಮೈಸೂರು ಜಿಲ್ಲೆಯ ಹುಣಸೂರು ನಗರದಲ್ಲಿ ಚಿನ್ನದ ಅಂಗಡಿ ದರೋಡೆ ಆಗಿದೆ. ಹುಣಸೂರು ಬಸ್ ನಿಲ್ದಾಣದ ಹಿಂಭಾಗದ ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್‌ ಆಭರಣ ಅಂಗಡಿಗೆ ನುಗ್ಗಿದ 5 ಜನ ದರೋಡೆಕೋರರು, ಅಪಾರ ಪ್ರಮಾಣದ ಚಿನ್ನಾಭರಣ ಲೂಟಿ ಮಾಡಿದ್ದಾರೆ. ಇದನ್ನೂ ಓದಿ: ಹೀಲಿಯಂ ಸಿಲಿಂಡರ್ ಬ್ಲಾಸ್ಟ್ – ಮೈಸೂರಿನ ಪ್ರವಾಸಿ ತಾಣಗಳಲ್ಲಿ ಹೈ ಅಲರ್ಟ್

ಅಂದಹಾಗೆ, ಕೇರಳ ಮೂಲಕದ ಈ ಸ್ಕೈ ಜ್ಯುವೆಲ್ಲರಿ ಶಾಪನ್ನ ಇದೇ ವರ್ಷದ ಏಪ್ರಿಲ್ 27ರಂದು ಡಾಲಿ ಧನಂಜಯ್ ಉದ್ಘಾಟನೆ ಮಾಡಿದ್ದರು.

Share This Article