ಮಠಕ್ಕೆ ಡೊನೇಷನ್ ಕೊಡೋ ಹೆಸ್ರಲ್ಲಿ ಕಳ್ಳತನ!

Public TV
1 Min Read

– ಅರ್ಚಕರ ಮನೆಯಲ್ಲೇ ಉಳಿದುಕೊಂಡಿದ್ದ ಕಳ್ಳ

ಮೈಸೂರು: ಬ್ರಾಹ್ಮಣರ ವೇಷ ಧರಿಸಿ ಮಠಕ್ಕೆ ಡೊನೇಷನ್ ಕೊಡುವ ನೆಪದಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಸ್ಥಳೀಯರು ರೆಡ್ ಹ್ಯಾಂಡಾಗಿ ಹಿಡಿದು ಥಳಿಸಿದ ಘಟನೆ ಮೈಸೂರಿನ ರಾಮಾನುಜ ರಸ್ತೆಯಲ್ಲಿ ನಡೆದಿದೆ.

ದೇವಾಲಯಕ್ಕೆ ಡೊನೇಷನ್ ಕೊಡುವ ನೆಪದಲ್ಲಿ ಮಠದ ಅರ್ಚಕರ ಮನೆಯಲ್ಲಿ ಉಳಿದುಕೊಂಡು ಕಳ್ಳತನ ಮಾಡುತ್ತಿದ್ದನು. ಪಂಚೆ, ಶಲ್ಯ, ತುಳಸಿ ಹಾರ ಧರಿಸಿ ಬಂದು ಬ್ರಾಹ್ಮಣರ ಮನೆಗಳಲ್ಲಿ ಉಳಿದುಕೊಳ್ಳುತ್ತಿದ್ದ ಇವನು ಮನೆಯವರ ನಂಬಿಕೆ ಗಳಿಸಿ ಅದೇ ಮನೆಯಲ್ಲೆ ಕಳ್ಳತನ ಮಾಡುತ್ತಿದ್ದ. ಇವತ್ತು ಕಳ್ಳತನ ಮಾಡುವ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.

ಪ್ರವೀಣ್ ಎಂದು ಹೇಳಿಕೊಂಡಿರುವ ಈ ಕಳ್ಳ ತಾನು ಭದ್ರಾವತಿ ನಿವಾಸಿ ಎಂದು ಹೇಳಿಕೊಂಡಿದ್ದಾನೆ. ರಾಮಾನುಜ ರಸ್ತೆಯ ಮನೆಯಲ್ಲಿ ಕಳ್ಳತನ ಮಾಡಿ ಗೂಸ ತಿಂದಿದ್ದಾನೆ. ರಾಘವೇಂದ್ರ ಸ್ವಾಮಿ ಮಠದ ಅರ್ಚಕ ವ್ಯಾಸಾತೀರ್ಥಾಚಾರ್ಯ ಮನೆಯಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ಈ ಹಿಂದೆಯೂ ಇದೇ ರೀತಿಯಲ್ಲಿ ಇವರ ಮನೆಯಲ್ಲಿ ಉಳಿದುಕೊಂಡು 50 ಸಾವಿರ ಕದ್ದಿದ್ದನು.

ಕೆ.ಆರ್.ಪೊಲೀಸರು ಇವನನ್ನು ವಶಕ್ಕೆ ಪಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *