ಮೈಸೂರಿನಲ್ಲಿ ಮರ್ಯಾದಾ ಹತ್ಯೆ ಪ್ರಕರಣ: ತಂದೆ ಸೇರಿ ಐವರ ಬಂಧನ

Public TV
1 Min Read

ಮೈಸೂರು: ಜಿಲ್ಲೆಯಲ್ಲಿ ನಡೆದಿದ್ದ ಮರ್ಯಾದಾ ಹತ್ಯೆ ಪ್ರಕರಣವೊಂದು ಭಾನುವಾರ ಬೆಳಕಿಗೆ ಬಂದಿದ್ದು, ಇದೀಗ ಹತ್ಯೆಯ ಆರೋಪಿಗಳನ್ನು ಹೆಚ್‍ಡಿ ಕೋಟೆ ಪೊಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರೀತಿಸಿ ಮದುವೆಯಾದಳು ಎಂಬ ಕಾರಣಕ್ಕೆ ಹೆತ್ತ ಮಗಳನ್ನೇ ಬಲಿ ಪಡೆದಿದ್ದು ತಡವಾಗಿ ಬೆಳಕಿಗೆ ಬಂದಿತ್ತು. ಇದೀಗ ತಂದೆ ಸೇರಿದಂತೆ ಒಟ್ಟು ಐವರು ಆರೋಪಿಗಳ ಬಂಧಿಸಲಾಗಿದೆ. ಗುರುಸಿದ್ದೇಗೌಡ, ಮಹದೇವಮ್ಮ, ಮಹೇಶ್, ಕಿರಣ್, ರಾಮೇಗೌಡ ಬಂಧಿತ ಆರೋಪಿಗಳು.

ಹತ್ಯೆ ಬಳಿಕ ಆರೋಪಿಗಳು ಊಟಿಗೆ ಹೋಗಿ ತಲೆ ಮರೆಸಿಕೊಂಡಿದ್ದರು. ಆರೋಪಿಗಳ ಜಾಡು ಹಿಡಿದು ಹೆಚ್‍ಡಿ ಕೋಟೆ ತಾಲೂಕು ಸರಗೂರು ಪಟ್ಟಣ ಠಾಣೆ ಪೊಲೀಸರು ಸಾಗಿದ್ದರು.

ಇದನ್ನೂ ಓದಿ: ಮೈಸೂರಿನಲ್ಲಿ ಮರ್ಯಾದಾ ಹತ್ಯೆ: ತಂದೆಯಿಂದಲೇ ಮಗಳ ಹತ್ಯೆ?

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಪಾರ್ವತಿಪುರದಲ್ಲಿ ತಮಗಿಷ್ಟವಿಲ್ಲದ ಯುವಕನ ಪ್ರೀತಿಸಿದ್ದಕ್ಕೆ ಪೋಷಕರಿಂದಲೇ ಯುವತಿಯ ಹತ್ಯೆ ನಡೆದಿರುವ ಬಗ್ಗೆ ಬಲವಾದ ಸಂಶಯ ವ್ಯಕ್ತವಾಗಿತ್ತು. ಯುವಕ ಕೃಷ್ಣಾ ಶೋಭಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. 19 ವರ್ಷದ ಶೋಭಾ ಹತ್ಯೆಯಾಗಿದ್ದಾಳೆಂದು ಕೃಷ್ಣ ಹೆಚ್‍ಡಿ ಕೋಟೆ ತಾಲೂಕು ಸರಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *