ಸಾಂಸ್ಕೃತಿಕ ನಗರಿಯಲ್ಲಿ ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಮಹೋತ್ಸವದ ಉದ್ಘಾಟನೆ ನೆರವೇರಿಸಿದೆ. ಲೇಖಕಿ ಹಾಗೂ ಬೂಕರ್ ಪ್ರಶಸ್ತಿ ವಿಜೇತೆಬಾನು ಮುಷ್ತಾಕ್ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಮಾಡುವ ಮೂಲಕ ಮಹೋತ್ಸವಕ್ಕೆ ಚಾಲನೆ ಕೊಟ್ಟಿದ್ದಾರೆ. ಬಳಿಕ ಆಹಾರ ಮೇಳ, ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದಾರೆ. ಶತಶತಮಾನಗಳ ಪಾರಂಪರಿಕ ಪ್ರತೀಕ ಹಬ್ಬವಾಗಿರುವ ದಸರಾ ಸೊಬಗು ಸಾಂಸ್ಕೃತಿಕ ನಗರಿಯಲ್ಲಿ ಕಳೆಗಟ್ಟಿದೆ. ಫಲಪುಷ್ಟ ಪ್ರದರ್ಶನ, ಆಹಾರದ ಮೇಳದ ಘಮಲು ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿದ್ದರೆ, ಅತ್ತ ಅರಮನೆ ವೇದಿಕೆಯಲ್ಲಿ ಮೊಳಗುತ್ತಿರುವ ಸಂಗೀತ ಝೇಂಕಾರ ಕಿವಿಗೆ ಇಂಪು ನೀಡುತ್ತಿವೆ. ಇದೆಲ್ಲವೂ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿರುವ ಫೋಟೋಗಳಿವೆ ಕಣ್ತುಂಬಿಕೊಳ್ಳಿ…