ಕಣ್ಣೀರಿಟ್ಟ ಅಭಿಮಾನಿಗಳಿಗೆ ಕಣ್ಣೀರಿಡುತ್ತಲೇ ತನ್ವೀರ್ ಸೇಠ್ ಸಾಂತ್ವನ

Public TV
1 Min Read

ಮೈಸೂರು: ತಮ್ಮ ಮೇಲೆ ಕೊಲೆ ಯತ್ನ ನಡೆಸಿದ ಆರೋಪಿ ಗುರುತು ಪತ್ತೆಗೆ ಮೈಸೂರಿನ ಕಾರಾಗೃಹಕ್ಕೆ ಆಗಮಿಸಿದ ಶಾಸಕ ತನ್ವೀರ್ ಸೇಠ್, ಪೊಲೀಸ್ ಪ್ರಕ್ರಿಯೆ ಮುಗಿಸಿ ಹೊರ ಬಂದ ಕೂಡಲೇ ಅವರ ಅಭಿಮಾನಿಗಳು ಶೇರ್ ಹೈ ಶೇರ್ ಹೈ ತನ್ವೀರ್ ಸೇಠ್ ಶೇರ್ ಹೈ ಎಂದು ಜೈಕಾರ ಕೂಗಿದರು. ಆದರೆ ಮಾತನಾಡದ ಸ್ಥಿತಿಯಲ್ಲಿಯೂ ಶಾಸಕರು ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದರು.

ಜೈಲಿನಿಂದ ಹೊರ ಬರುವ ವೇಳೆ ತನ್ವೀರ್ ಸೇಠ್ ನೋಡಲು ಅಭಿಮಾನಿಗಳು ಮುಗಿಬಿದ್ದ ಪ್ರಸಂಗ ನಡೆಯಿತು. ತನ್ವೀರ್ ಸೇಠ್ ಕಾರಿಗೆ ಅಡ್ಡಹಾಕಿ ಕೈ ಮುಗಿದರು. ಅಭಿಮಾನಿಗಳ ನಿಯಂತ್ರಣಕ್ಕೆ ಪೊಲೀಸರ ಹರಸಾಹಸಪಟ್ಟರು. ಈ ವೇಳೆ ಅಭಿಮಾನಿಗಳ ಕಂಡು ಭಾವುಕರಾದ ತನ್ವೀರ್ ಸೇಠ್, ಅಭಿಮಾನಿಗಳ ಕಣ್ಣೀರಿಗೆ ತಾವೂ ಕಣ್ಣೀರಾದರು. ಅಲ್ಲದೆ ಅಭಿಮಾನಿಗಳನ್ನು ತಬ್ಬಿಕೊಂಡು ಕಣ್ಣೀರಿಟ್ಟರು. ನಂತರ ಅಭಿಮಾನಿಗಳನ್ನು ಸಂತೈಸಿ ಬಳಿಕ ಪೊಲೀಸ್ ಭದ್ರತೆಯಲ್ಲಿ ಮನೆಗೆ ತೆರಳಿದರು.

ದುಷ್ಕರ್ಮಿ ನಡೆಸಿದ್ದ ಕೊಲೆ ಯತ್ನದಿಂದ ಜೀವನ್ಮರಣ ಹೋರಾಟದಲ್ಲಿದ್ದ ಶಾಸಕ ತನ್ವೀರ್ ಸೇಠ್ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ಇಂದು ಮೈಸೂರಿಗೆ ಹಿಂದುರಿಗಿದ್ದಾರೆ. ಮೈಸೂರಿಗೆ ಆಗಮಿಸಿದ ತನ್ವೀರ್ ಸೇಠ್, ನೇರವಾಗಿ ಮೈಸೂರು ಕೇಂದ್ರ ಕಾರಾಗೃಹಕ್ಕೆ ಆಗಮಿಸಿದರು. ತಮ್ಮ ಮೇಲೆ ಕೊಲೆ ಯತ್ನ ನಡೆಸಿದ ಆರೋಪಿ ಗುರುತು ಪತ್ತೆಗೆ ಶಾಸಕರು ಕಾರಾಗೃಹಕ್ಕೆ ಬಂದರು. ಈ ವೇಳೆ ತಮ್ಮ ಶಾಸಕರನ್ನು ಮಾತನಾಡಿಸಲು ಬೆಂಬಲಿಗರು ಮುಗಿಬಿದ್ದರು. ಶಾಸಕರ ಕಂಡ ಕೆಲ ಬೆಂಬಲಿಗರು ಕಣ್ಣಿರಿಟ್ಟರು. ಇದನ್ನೂ ಓದಿ: ಮೈಸೂರಿಗೆ ಆಗಮಿಸಿ ನೇರವಾಗಿ ಜೈಲಿಗೆ ತೆರಳಿದ ತನ್ವೀರ್ ಸೇಠ್!

Share This Article
Leave a Comment

Leave a Reply

Your email address will not be published. Required fields are marked *