ಮೈಸೂರು ಉದ್ಯಮಿಯ ಕೊಲೆ ಕೇಸ್‍ಗೆ ಟ್ವಿಸ್ಟ್ – ತಂದೆಯನ್ನೇ ಬರ್ಬರ ಹತೈಗೈದ 16ರ ಮಗ!

Public TV
2 Min Read

ಮೈಸೂರು: ಮನೆಯ ಒಳಗಿನ ಜಗಳ ಹದಿಹರೆಯದವರ ಮೇಲೆ ಎಂಥ ದುಷ್ಪರಿಣಾಮ ಬೀರಿ ಎಂಥಾ ಕೆಲಸಕ್ಕೆ ಕೈ ಹಾಕಿಸುತ್ತೆ ಎಂಬುದಕ್ಕೆ ಮೈಸೂರಿನ ಪ್ರಕರಣ ಸ್ಪಷ್ಟ ಸಾಕ್ಷಿ. ಜೀವನ ಏನೂ ಅಂತಾ ಅರಿಯಬೇಕಾದ ವಯಸ್ಸಿನಲ್ಲಿ ಈ ಹುಡುಗ ಜೈಲು ಪಾಲಾಗಿದ್ದಾನೆ. ಕಷ್ಟಪಟ್ಟು ಬದುಕು ಕಟ್ಟಿಕೊಂಡಿದ್ದ ಸಂಪತ್, ಕ್ಷುಲ್ಲಕ ವಿಚಾರಗಳಿಗೆ ಜಗಳ ಮಾಡಿ ಮಗನಿಂದನೇ ಕೊಲೆಯಾಗಿರೋದು ದುರಂತವಾಗಿದೆ.

ಸೋಮವಾರ ಮೈಸೂರಿನ ಬೃಂದಾವನ ಬಡಾವಣೆಯ ನಿವಾಸಿ ರಿಯಲ್ ಎಸ್ಟೇಟ್ ಹಾಗೂ ಅಗರಬತ್ತಿ ವ್ಯಾಪಾರಿ ಸಂಪತ್ ಕುಮಾರ್‍ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. 16 ವರ್ಷದ ಮಗನ ಮುಂದೆಯೇ ತಂದೆಯನ್ನು ಕೊಲೆ ಮಾಡಲಾಗಿದೆ ಎಂಬ ಸುದ್ದಿ ಹರಡಿತ್ತು. ಇದನ್ನೂ ಓದಿ: 16 ವರ್ಷದ ಮಗನ ಮುಂದೆಯೇ ತಂದೆಯನ್ನು ಹತ್ಯೆ ಮಾಡಿದ ದುಷ್ಕರ್ಮಿ

ಕೊಲೆಯಾದ ಸಂಪತ್ ಅವರ 16 ವರ್ಷದ ಮಗ, ತನ್ನ ಮುಂದೆಯೇ ರಾಡ್‍ಗಳಿಂದ ತನ್ನ ತಂದೆಯನ್ನು ಅಪರಿಚಿತರು ಹತ್ಯೆ ಮಾಡಿ ಓಡಿ ಹೋದರು ಎಂದು ಪೊಲೀಸರಿಗೆ ಹೇಳಿದ್ದ. ಈ ಕೊಲೆಗೆ ರಿಯಲ್ ಎಸ್ಟೇಟ್ ಉದ್ಯಮದ ವೈಷಮ್ಯ ಕಾರಣ ಇರಬಹುದು ಎಂದು ಮೇಲ್ನೋಟಕ್ಕೆ ಅನ್ನಿಸಿತ್ತು. ಆದರೆ ಕೊಲೆಯಾದ ವ್ಯಕ್ತಿಯ ಮಗ ಹೇಳಿಕೆಗಳಲ್ಲೂ ಅನುಮಾನಗಳು ಮೂಡಿದ್ದವು. ಹೀಗಾಗಿ ಪೊಲೀಸರು ಕೊಲೆಯಾದ ವ್ಯಕ್ತಿಯ ಮಗನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು.

ರೋಚಕ ತಿರುವು
ವಿಚಾರಣೆ ವೇಳೆ ಹದಿಹರೆಯದ ಮಗನೇ ತನ್ನ ತಂದೆಯನ್ನು ಬರ್ಬರವಾಗಿ ಕೊಂದ ಸತ್ಯ ಹೊರ ಬಿದ್ದಿದೆ. ಸಂಪತ್ ಕುಟುಂಬದಲ್ಲಿ ಬಹಳ ವೈಮನಸ್ಸು ಇತ್ತು. ಸಂಪತ್ ಪ್ರತಿ ನಿತ್ಯವೂ ತನ್ನ ಪತ್ನಿ – ಮಗನ ಜೊತೆ ಜಗಳವಾಡ್ತಿದ್ದ. ಇದರಿಂದ ಬೇಸತ್ತ ಮಗ, ತನ್ನ ತಾಯಿ ಮನೆಯಲ್ಲಿ ಇಲ್ಲದ ವೇಳೆ ಕಬ್ಬಿಣದ ರಾಡ್‍ನಿಂದ ತಂದೆಯನ್ನು ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ನಂತರ ಈ ಕೊಲೆಯನ್ನು ಅಪರಿಚಿತರು ಮಾಡಿ ಹೋದರು ಎಂದು ಬಿಂಬಿಸುವ ನಾಟಕವಾಡಿದ್ದಾನೆ. ಮನೆಯಿಂದ ಓಡಿ ಹೊರಗಡೆ ಬಂದು ಅರಚಿಕೊಂಡು ಯಾರೋ ಕೊಲೆ ಮಾಡಿ ಓಡಿ ಹೋದರು ಎಂದು ಸನ್ನಿವೇಶ ಸೃಷ್ಟಿಸಿದ್ದಾನೆ. ತನ್ನ ತಾಯಿಗೂ ಇದೇ ಕಥೆ ಹೇಳಿದ ಮಗ, ಅದರ ಆಧಾರದ ಮೇಲೆ ಕೇಸ್ ಕೂಡ ಕೊಡಿಸಿದ್ದ. ಇದನ್ನೂ ಓದಿ: ಕೇಂದ್ರ ಸರ್ಕಾರಕ್ಕೆ ಜನರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ: ಈಶ್ವರ ಖಂಡ್ರೆ ವಾಗ್ದಾಳಿ

ಪೆÇಲೀಸರಿಗೆ ಕೊಲೆ ನಡೆದ ವೇಳೆ, ಅಲ್ಲಿನ ಸನ್ನಿವೇಶ, ಸಿಸಿಟಿವಿ ದೃಶ್ಯಗಳು ಎಲ್ಲವನ್ನು ಗಮನಿಸಿದ ಮೇಲೆ ಯಾರು ಮನೆಗೆ ಬರದೆ ಇರೋದು ಸ್ಪಷ್ಟವಾಗಿದೆ. ಆಗ, ಮಗನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾಗ ಮಗ ತಾನೇ ತನ್ನ ತಂದೆಯನ್ನು ಕೊಂದೆ ಎಂಬುದನ್ನು ಒಪ್ಪಿಕೊಂಡಿದ್ದಾನೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *