ಎತ್ತಿನಗಾಡಿ ಓಡಿಸುವಾಗ ಪೈಪೋಟಿಗೆ ಇಳಿದ ಇಬ್ಬರು ರೈತರ ಸಾವು

Public TV
0 Min Read

ಮೈಸೂರು: ಎತ್ತಿನಗಾಡಿ ಓಡಿಸುವಾಗ ಪೈಪೋಟಿಗೆ ಇಳಿದು ಇಬ್ಬರು ರೈತರು ಸಾವನ್ನಪ್ಪಿರುವ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ಕಾರ್ಯ ಸಿದ್ದೇಶ್ವರ ಬೆಟ್ಟದಲ್ಲಿ ನಡೆದಿದೆ.

ಈ ಘಟನೆಯಲ್ಲಿ ದೇಬೂರು ಗ್ರಾಮದ ನಿವಾಸಿಗಳಾದ ಕೆಂಪರಾಜು(27) ಹಾಗೂ ಚೇತನ್(22) ಮೃತಪಟ್ಟಿದ್ದಾರೆ. ಎತ್ತಿನಗಾಡಿ ಓಡಿಸುವಾಗ ಇಬ್ಬರು ಪೈಪೋಟಿಗೆ ಇಳಿದಿದ್ದಾರೆ. ಈ ವೇಳೆ ವೇಗವಾಗಿ ಓಡುತ್ತಿದ್ದ ಎತ್ತಿನಗಾಡಿ ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ.

ಗ್ರಾಮಸ್ಥರೆಲ್ಲ ಸೇರಿ ಸುಮಾರು 15 ಗಾಡಿಗಳಲ್ಲಿ ಕಾರ್ಯ ಸಿದ್ದೇಶ್ವರ ಬೆಟ್ಟಕ್ಕೆ ಪೂಜೆಗೆ ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ಈ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *