ಹಿಂದೂ ಯುವತಿಯನ್ನ ಪ್ರೀತ್ಸಿದ್ದಕ್ಕೆ ಕಂಬಕ್ಕೆ ಕಟ್ಟಿ ಥಳಿಸಿ ಮುಸ್ಲಿಂ ಯುವಕನ ಹತ್ಯೆ

Public TV
1 Min Read

ರಾಂಚಿ: 19 ವರ್ಷದ ಯುವಕನೊಬ್ಬನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪರಿಣಾಮ ಆತ ಸಾವನ್ನಪ್ಪಿರೋ ಘಟನೆ ಜಾರ್ಖಂಡ್‍ನ ಗುಮ್ಲಾ ಜಿಲ್ಲೆಯಲ್ಲಿ ನಡೆದಿದೆ. 15 ವರ್ಷದ ಹಿಂದೂ ಹುಡುಗಿಯನ್ನು ಪ್ರೀತಿಸಿದ್ದೇ ಯುವಕನ ಮೇಲಿನ ಹಲ್ಲೆಗೆ ಕಾರಣ ಎಂದು ಪೊಲೀಸರು ಹೇಳಿದ್ದು, ಘಟನೆ ಸಂಬಂಧ ಮೂವರನ್ನು ಬಂಧಿಸಿರುವುದಾಗಿ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಮೊಹಮ್ಮದ್ ಶಾಲಿಕ್ ಹಲ್ಲೆಗೊಳಗಾಗಿ ಮೃತಪಟ್ಟ ದುದೈರ್ವಿ. ಶಾಲಿಕ್ ಹಿಂದೂ ಧರ್ಮದ ತನ್ನ ಪ್ರೇಯಸಿಯೊಂದಿಗೆ ಕಾಣಿಸಿಕೊಂಡ ಕಾರಣ ಆತನನ್ನು ಸ್ಥಳೀಯರು ಥಳಿಸಿದ್ದರು. ಆದ್ರೆ ಇದು ಪ್ರೀತಿಯನ್ನ ವಿರೋಧಿಸಿ ನಡೆದ ಹಲ್ಲೆ. ಕೋಮು ದ್ವೇಷದಿಂದ ನಡೆದುದಲ್ಲ ಎಂದು ಎಸ್‍ಪಿ ಚಂದನ್ ಕುಮಾರ್ ಜಾ ಹೇಳಿಕೆ ನೀಡಿದ್ದಾರೆ.

ಹುಡುಗಿಯನ್ನು ವಿಚಾರಣೆಗೆ ಒಳಪಡಿಸಿದಾಗ ನೀಡಿದ ಹೇಳಿಕೆಯ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಹುಡುಗಿಯ ಕುಟುಂಬಸ್ಥರು ಆಕೆಯ ಪ್ರೀತಿಯನ್ನ ವಿರೋಧಿಸಿದ್ರು. ಆಕೆಯಿಂದ ದೂರವಿರುವಂತೆ ಯುವಕನಿಗೆ ಎಚ್ಚರಿಕೆ ನೀಡಿದ್ರು. ಆದ್ರೆ ಶಾಲಿಕ್ ಅವರ ಮಾತುಗಳನ್ನ ಕೇಳದೆ ಕಳೆದ ಬುಧವಾರ ರಾತ್ರಿ ಹುಡುಗಿಯನ್ನ ಮನೆಯ ಬಳಿ ಡ್ರಾಪ್ ಮಾಡಲು ಬಂದಿದ್ದ. ಶಾಲಿಕ್ ಹಾಗೂ ಹುಡುಗಿಯನ್ನು ಒಟ್ಟಿಗೆ ನೋಡಿದ ಸ್ಥಳೀಯರು ಆತನನ್ನು ಹುಡುಗಿಯ ಎದುರೇ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ ಅಂತ ಹೇಳಿದ್ದಾರೆ.

ತಡರಾತ್ರಿಯಾದ್ರೂ ಶಾಲಿಕ್ ಮನೆಗೆ ಬರದ ಕಾರಣ ಆತನ ಕುಟುಂಬಸ್ಥರು ಸ್ನೇಹಿರನ್ನು ವಿಚಾರಿಸಿದ್ದಾರೆ. ನಂತರ ಗಂಭಿರ ಸ್ಥಿತಿಯಲ್ಲಿದ್ದ ಶಾಲಿಕ್‍ನನ್ನು ಗುಮ್ಲಾದ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದ್ರೆ ತೀವ್ರವಾಗಿ ಗಾಯಗೊಂಡ ಪರಿಣಾಮ ಶಾಲಿಕ್ ಗುರುವಾರದಂದು ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿ ಚಂದನ್ ಕುಮಾರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *