ಮುಂಬೈ ದುರಂತ: ಜೀವ ಪಣಕ್ಕಿಟ್ಟು ಅಪಘಾತದ ಅನಾಹುತದಿಂದ ಹಲವರನ್ನು ರಕ್ಷಿಸಿದ ಪೈಲಟ್!

Public TV
1 Min Read

ಮುಂಬೈ: ನಗರದ ವಸತಿ ಪ್ರದೇಶದಲ್ಲಿ ಪತನಗೊಳ್ಳಬೇಕಿದ್ದ ಲಘು ವಿಮಾನವನ್ನು ತನ್ನ ಜೀವ ಪಣಕ್ಕಿಟ್ಟು ನಿರ್ಜನ ಪ್ರದೇಶದ ಕಡೆ ಚಾಲಿಸುವಂತೆ ಮಾಡಿ ಇಬ್ಬರು ಪೈಲಟ್ ಹಲವರ ಜೀವ ರಕ್ಷಿಸಿದ್ದಾರೆ.

ಹೌದು, ಗುರುವಾರ ಮುಂಬೈನ ವಸತಿ ಪ್ರದೇಶದಲ್ಲಿ ಪತನವಾದ ಖಾಸಗಿ ಕಂಪೆನಿಯ ಲಘು ವಿಮಾನ ಜನ ವಸತಿ ಪ್ರದೇಶದಲ್ಲಿ ಪತನವಾಗಬೇಕಿತ್ತು. ಆದರೆ ಈ ವೇಳೆ ಸಮಯಪ್ರಜ್ಞೆ ತೋರಿದ ಪೈಲಟ್ ಗಳು ನಿರ್ಜನ ಪ್ರದೇಶದ ಕಡೆ ಚಲಿಸಿವಂತೆ ಮಾಡಿ ತಮ್ಮ ಜೀವ ಕಳೆದು ಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ವಿಮಾನಯಾನ ಖಾತೆ ಮಾಜಿ ಸಚಿವ ಪ್ರಫುಲ್ ಪಟೇಲ್ ಪೈಲಟ್ ತ್ಯಾಗವನ್ನು ಮೆಚ್ಚಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ನಾಲ್ಕು ಜನರಿದ್ದ ವಿಮಾನವು ಮುಂಬೈನ ಘಟಕೋಪರ್ ಭಾಗದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದಕ್ಕೆ ಅಪ್ಪಳಿಸಿತ್ತು. ಬೀಚ್ ಕ್ರಾಫ್ಟ್ ಕಿಂಗ್ ಏರ್ ಸಿ 90 ಟರ್ಬೋಪ್ರಾಪ್ ಹೆಸರಿನ ಲಘು ವಿಮಾನ ಅಪಘಾತಕ್ಕೀಡಾದ ಪರಿಣಾಮ ವಿಮಾನದಲ್ಲಿದ್ದ ಮುಖ್ಯ ಪೈಲಟ್ ಪಿಎಸ್ ರಜಪೂತ್, ಕೋ ಪೈಲಟ್ ಮಾರಿಯಾ ಝುಬೇರಿ, ಎಂಜಿನಿಯರ್ ಸುರ್ಬಿ ಮತ್ತು ಟೆಕ್ನಿಶಿಯನ್ ಮನೀಶ್ ಪಾಂಡೆ ಹಾಗೂ ಓರ್ವ ಸ್ಧಳೀಯ ವ್ಯಕ್ತಿ ಸೇರಿ ಐವರು ಸಜೀವ ದಹನವಾಗಿದ್ದರು.

ವಿಮಾನ ಪತನಗೊಳ್ಳುತ್ತಿದ್ದಂತೆಯೇ ಬೆಂಕಿ ಕಾಣಿಸಿಕೊಂಡು ದಟ್ಟವಾದ ಹೊಗೆ ಸುತ್ತಲಿನ ಪ್ರದೇಶವನ್ನು ಆವರಿಸಿಕೊಂಡಿತ್ತು. ಈ ವೇಳೆ ಅಗ್ನಿಶಾಮಕದಳದ ವಾಹನಗಳು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು. ಆದರೆ ಘಟನೆಯನ್ನು ಯಾರನ್ನು ರಕ್ಷಣೆ ಮಾಡಲು ಸಾಧ್ಯವಾಗಿರಲಿಲ್ಲ. ವಿಮಾನ ನಿಗಧಿತ ಗುರಿ ತಲುಪಲು ಕೇವಲ 7 ಮೈಲಿ ದೂರ ಪ್ರಯಾಣ ಮಾಡ ಬೇಕಾಗಿತ್ತು. ಕೇವಲ ಮೂರಿಂದ ನಾಲ್ಕು ನಿಮಷ ಸಮಯದಲ್ಲಿ ವಿಮಾನ ಲ್ಯಾಂಡ್ ಆಗುತ್ತಿತ್ತು ಎಂದು ಮಾಧ್ಯಮವೊಂದು ವರದಿ ಮಾಡಿದೆ. ಸದ್ಯ ಘಟನೆಯ ಕುರಿತು ನಾಗರಿಕಾ ವಿಮಾನಯಾನ ಮಹಾ ನಿರ್ದೇಶನಾಲಯ(ಡಿಜಿಸಿಎ) ತನಿಖೆಗೆ ಆದೇಶ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *