ತಾರಾ ದಂಪತಿ ಮೇಲೆ ಬಹುಕೋಟಿ ವಂಚನೆ ಪ್ರಕರಣ

Public TV
1 Min Read

ಬಾಬು ರಾಜ್ ಮತ್ತು ವಾಣಿ ವಿಶ್ವನಾಥ್ ತಾರಾ ದಂಪತಿ ಸಿನಿಮಾ ಮಾಡುವ ನೆಪದಲ್ಲಿ ರಿಯಾಜ್ ಎನ್ನುವವರಿಗೆ ಮೋಸ ಮಾಡಿದ್ದಾರೆ ಎಂದು ಕೇರಳ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತ್ರಿಶೂರ್ ಜಿಲ್ಲೆಯ ತಿರುವಿಲ್ವಾಮಲ ಮೂಲದ ರಿಯಾಜ್ ಎನ್ನುವವರು ಈ ದಂಪತಿ ವಿರುದ್ಧ ದೂರು ನೀಡಿದವರು. ಈ ತಾರಾ ದಂಪತಿ ತಮಗೆ 3.14 ಕೋಟಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ರಿಯಾಜ್ ಗಾಗಿ ಸಿನಿಮಾವೊಂದನ್ನು ಮಾಡಿಕೊಡುವುದಾಗಿ ಈ ದಂಪತಿ 2017ರಲ್ಲಿ ಕೋಟಿ ಕೋಟಿ ಹಣವನ್ನು ಬ್ಯಾಂಕ್ ಖಾತೆಗಳಿಗೆ ವಿವಿಧ ಹಂತಗಳಲ್ಲಿ ಪಡೆದುಕೊಂಡಿರುವುದ ರಿಯಾಜ್ ದೂರಿನಲ್ಲಿ ತಿಳಿಸಿದ್ದಾರೆ.  ಈ ಸಿನಿಮಾ ಸಂಬಂಧಿಸಿದಂತೆ ತ್ರಿಶೂರ್ ಮತ್ತು ಕೊಚ್ಚಿಯಲ್ಲಿ ಮಾತುಕತೆ ಆಗಿದೆ ಎಂದೂ ಹೇಳಿದ್ದಾರೆ. ಚಿತ್ರ ಬಿಡುಗಡೆಯಾದ ನಂತರ ಬರುವ ಲಾಭದಲ್ಲಿ ಹಣವನ್ನು ವಾಪಸ್ಸು ಮಾಡುವುದಾಗಿ ತಿಳಿಸಿದ್ದರಂತೆ. ಆದರೆ, ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದಿದ್ದಾರೆ. ಇದನ್ನೂ ಓದಿ:ಶಶಾಂಕ್ ನಿರ್ದೇಶನದ ‘ಲವ್ 360’ ಚಿತ್ರದ ಮತ್ತೊಂದು ಹಾಡು ರಿಲೀಸ್

ಬಾಬುರಾಜ್ ಮತ್ತು ಪತ್ನಿ ವಾಣಿ ವಿಶ್ವನಾಥ್ ಮಲಯಾಳಂ ಸೇರಿದಂತೆ ದಕ್ಷಿಣದ ಹಲವು ಸಿನಿಮಾಗಳಲ್ಲಿ ನಟಿಸಿದ್ದು, ನಿರ್ಮಾಣಕ್ಕೂ ಮುಂದಾಗಿದ್ದರು. ಬಾಬು ರಾಜ್ ಗಿಂತಲೂ ವಾಣಿ ವಿಶ್ವನಾಥ್ ಫೇಮಸ್ ನಟಿಯಾಗಿ ಗುರುತಿಸಿಕೊಂಡವರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *