ಖಾರದ ಪುಡಿ ಎರಚಿ, ಲಾಂಗ್ ಬೀಸಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೊಲೆಗೆ ಯತ್ನ

Public TV
1 Min Read

ಬಳ್ಳಾರಿ: ಗಣಿ ನಾಡು ಬಳ್ಳಾರಿಯಲ್ಲಿ ಸಿನಿಮೀಯ ರೀತಿಯಲ್ಲಿ ಕಾಂಗ್ರೆಸ್ ನ ಪಾಲಿಕೆ ಸದಸ್ಯನ ಹತ್ಯೆಗೆ ಯತ್ನ ನಡೆದಿದೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಮಹಾನಗರ ಪಾಲಿಕೆಯ 8ನೇ ವಾರ್ಡ್ ಸದಸ್ಯ ಹಂದ್ರಾಳ ಸೀತಾರಾಮ ಅವರ ಮೇಲೆ ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿ ಹತ್ಯೆ ಮಾಡಲು ಯತ್ನಿಸಲಾಗಿದೆ. ಗುರುವಾರ ರಾತ್ರಿ 7 ಗಂಟೆಯ ವೇಳೆಗೆ ಬಳ್ಳಾರಿಯ ಹಂದ್ರಾಳದಲ್ಲಿನ ಸೀತಾರಾಮ ಮನೆಯ ಮುಂದೆಯೇ ಅವರ ಮೇಲೆ ಹನ್ನೊಂದು ಜನರು ಸೀನಿಮಯ ರೀತಿಯಲ್ಲಿ ದಾಳಿ ನಡೆಸಿ ಹತ್ಯೆಗೆ ಮುಂದಾಗಿದ್ದರು.

ಆಂಧ್ರದ ಅನಂತಪುರ ಹಾಗೂ ತಾಡಪತ್ರಿಯಿಂದ ಬಂದಿದ್ದ ಹನ್ನೊಂದು ಜನ ಸುಪಾರಿ ಹಂತಕರು ಖಾರದಪುಡಿ ಎರಚಿ, ಲಾಂಗು ಮಚ್ಚುಗಳೊಂದಿಗೆ ಸೀತಾರಾಮ ಅವರ ಮೇಲೆ ದಾಳಿ ನಡೆಸಿದ್ರು.

ಹತ್ಯೆ ಯತ್ನ ನಡೆಯುತ್ತಿದ್ದಂತೆ ಸೀತಾರಾಮ ಸುತ್ತ ಇದ್ದ ಸ್ಥಳೀಯರು ಮತ್ತು ಮನೆಯಲ್ಲಿದ್ದ ಬೆಂಬಲಿಗರು ಮರಳಿ ಅಟ್ಯಾಕ್ ಮಾಡಿ ಹತ್ಯೆಗೆ ಬಂದವರ ಮೇಲೆಯೇ ತಿರುಗಿಬಿದ್ದಿದ್ದಾರೆ. ಹತ್ಯೆಗೆ ಬಂದ ತಂಡದಲ್ಲಿನ ಒಬ್ಬನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪಾಲಿಕೆ ಸದಸ್ಯನ ಹತ್ಯೆಗೆ ಅನಂತಪುರದ ಶಿವುಡು, ಪೆದ್ದಣ್ಣ, ರವಿ ಎನ್ನುವವರು ಸುಪಾರಿ ನೀಡಿದ್ದರು ಎಂದು ತಿಳಿದುಬಂದಿದೆ.

ಆದ್ರೆ ಈ ಸುಪಾರಿ ಹತ್ಯೆ ಯತ್ನ ನಡೆದಿರುವುದು ಹಳೇ ದ್ವೇಷದಿಂದಲೋ ಅಥವಾ ಕಾಂಗ್ರೆಸ್ ಟಿಕೆಟ್ ಆಕ್ಷಾಂಕಿಯಾಗಿರುವುದರಿಂದಲೋ ಅನ್ನೋದು ಪೊಲೀಸರ ತನಿಖೆಯಿಂದ ಬಯಲಾಗಬೇಕಿದೆ. ನಾನು ಟಿಕೆಟ್ ಆಕ್ಷಾಂಕಿಯಾಗಿದ್ದೆ, ಹಾಗಾಗೇ ಈ ಹತ್ಯೆ ಯತ್ನ ನಡದಿರಬಹುದು ಅಂತಾರೆ ಪಾಲಿಕೆ ಸದಸ್ಯ.

ಘಟನೆಯ ಕುರಿತು ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *