ಮುದ್ದೆ ತಿನ್ನಿ ಊಟ ಗೆಲ್ಲಿ- ಅಪ್ಪಾಜಿ ಕ್ಯಾಂಟೀನ್‍ನಲ್ಲಿ ಇಂದು ಸ್ಪರ್ಧೆ

Public TV
1 Min Read

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾಗಿ ಮುದ್ದೆ ಸ್ಪರ್ಧೆಗೆ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಭಾರೀ ಸಿದ್ಧತೆ ನಡೆಸಿದ್ದಾರೆ.

ಅಪ್ಪಾಜಿ ಕ್ಯಾಂಟೀನ್ ಮೊದಲ ವರ್ಷದ ಆಚರಣೆ ನಿಮಿತ್ತ ‘ಮುದ್ದೆ ತಿನ್ನಿ ಊಟ ಗೆಲ್ಲಿ’ ಎನ್ನುವ ವಿಶಿಷ್ಟ ಸ್ಪರ್ಧೆಯನ್ನು ಟಿ.ಎ.ಶರವಣ ಆಯೋಜಿಸಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ನಗರದ ಬಸವನಗುಡಿಯಲ್ಲಿರುವ ಅಪ್ಪಾಜಿ ಕ್ಯಾಂಟೀನ್ ಬಳಿ ಸ್ಪರ್ಧೆ ನಡೆಯಲಿದೆ.

ಬಹುಮಾನ ಏನು?
ಪಂದ್ಯದಲ್ಲಿ ಜಯ ಸಾಧಿಸಿದ ಮೂವರಿಗೆ ಬಂಪರ್ ಗಿಫ್ಟ್ ನೀಡಲಾಗುತ್ತದೆ. ಅದು ಏನು ಅಂದರೆ, ಮೊದಲ ಬಹುಮಾನ ಒಂದು ತಿಂಗಳು ಟಿಫನ್, ಮಧ್ಯಾಹ್ನದ ಊಟ ಉಚಿತ. ಇನ್ನು ಎರಡನೇ ಬಹುಮಾನ 20 ದಿನ ಟಿಫನ್, ಊಟ ಮತ್ತು ಮೂರನೇ ಸ್ಥಾನ ಪಡೆದವರಿಗೆ 10 ದಿನ ಟಿಫನ್ ಹಾಗೂ ಊಟ ಉಚಿತವಾಗಿ ಸಿಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *