ಇಡಿ ನೋಟಿಸ್‌ ನೀಡಿದೆ ಎಂದು ನಿಮ್ಗೆ ಹೇಳಿದ್ದು ಯಾರು? – ಸಿಎಂ

Public TV
1 Min Read

ಬಳ್ಳಾರಿ: ನಿಮಗೆ ಗೊತ್ತಿದೆಯಾ? ಜಾರಿ ನಿರ್ದೇಶನಾಲಯ (ED) ಇಡಿ ನೋಟಿಸ್‌ ನೀಡಿದೆ ಎಂದು ಹೇಳಿದವರು ಯಾರು ಎಂದು ಸಿಎಂ ಸಿದ್ದರಾಮ್ಯಯ (CM Siddaramaiah) ಪ್ರಶ್ನಿಸಿದ್ದಾರೆ.

ಮಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಇಡಿ ನೋಟಿಸ್‌ ನೀಡಿದೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಸಂಡೂರಿನಲ್ಲಿ (Sanduru) ಪ್ರತಿಕ್ರಿಯಿಸಿದ ಅವರು, ನಿಮಗೆ ಹೇಳಿದವರು ಯಾರು ಎಂದು ಪ್ರಶ್ನಿ ಗರಂ ಆದರು. ಇದನ್ನೂ ಓದಿ: ವಕ್ಫ್ ವಿವಾದಕ್ಕೆ ಬೇಸತ್ತು ಯುವ ರೈತ ಆತ್ಮಹತ್ಯೆ!

 

ಸಂಡೂರು ಕ್ಷೇತ್ರದಲ್ಲಿ ನಮ್ಮ ನಿರೀಕ್ಷೆಗೆ ಮೀರಿ ಸ್ಪಂದನೆ ಸಿಕ್ಕಿದೆ. ನೂರಕ್ಕೆ ಇನ್ನೂರುಷ್ಟು ಸಂಡೂರು ಗೆಲ್ಲುತ್ತೇವೆ. ಚನ್ನಪಟ್ಟಣ , ಶಿಗ್ಗಾವಿಯಲ್ಲೂ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ರಾಜಕೀಯ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ದಾಖಲೆ ತಿದ್ದುಪಡಿಯನ್ನು ಸರಿಪಡಿಸಲು ಹೇಳಿರುವೆ. ಬಿಜೆಪಿ ಇದನ್ನೇ ಚುನಾವಣಾ ಅಸ್ತ್ರವನ್ನಾಗಿ ಬಳಕೆ ಮಾಡುತ್ತಿದೆ. ವಕ್ಫ್‌ ಮಸೂದೆಗೆ ಸಂಬಂಧಿಸಿದಂತೆ ರಚನೆಯಾದ ಜಂಟಿ ಸಂಸದೀಯ ಸಮಿತಿ ಬಂದಿದ್ದು ರಾಜಕೀಯಕ್ಕೆ ಎಂದು ವಾಗ್ದಾಳಿ ನಡೆಸಿದರು.

 

Share This Article