ಬೆಂಬಲಿಗರಿಂದ ಗಿಜುಗುಡುತ್ತಿದ್ದ ಎಂಟಿಬಿ ನಿವಾಸದಲ್ಲಿ ನೀರವ ಮೌನ

Public TV
1 Min Read

ಬೆಂಗಳೂರು: ಹೊಸಕೋಟೆಯ ಹೀನಾಯ ಸೋಲಿಗೆ ತಲೆ ಕೆಡಿಸಿಕೊಂಡ ಎಂಟಿಬಿ ನಾಗರಾಜ್ ಬೆಳಗ್ಗೆಯಿಂದಲೂ ಹೊರಗೂ ಬಾರದೇ ಮನೆಯಲ್ಲೇ ಕುಳಿತುಕೊಂಡಿದ್ದಾರೆ.

ಎಂಟಿಬಿ ನಾಗರಾಜ್ ಅವರು ಮತ ಎಣಿಕಾ ಕೇಂದ್ರಕ್ಕೆ ಹೋಗದೇ ಮಗನನ್ನು ಕಳುಹಿಸಿದ್ದರು. ಬೆಳಗ್ಗೆ 9 ಗಂಟೆ ನಂತರ ಟ್ರೆಂಡ್ ನೋಡಿ ಹೋಗೋಣ ಎಂದುಕೊಂಡಿದ್ದ ಎಂಟಿಬಿಗೆ ಮುನ್ನಡೆಯ ಟ್ರೆಂಡ್ ಸಿಗಲೇ ಇಲ್ಲ. ಕೌಂಟಿಂಗ್ ಸೆಂಟರ್ ನಿಂದ ಮಗನ ಮೂಲಕ ಮಾಹಿತಿ ಪಡೆಯುತ್ತಿದ್ದ ಅವರು ಒಂದು ಸುತ್ತಲ್ಲೂ ಮೇಲುಗೈ ಸಾಧಿಸದೇ ಸೋತಿದ್ದಾರೆ.

ಕಳೆದ ಚುನಾವಣೆಯಲ್ಲಿ ಕಡೆ ಸುತ್ತಗಳ ಎಣಿಕೆಯಲ್ಲಿ ಜಯಬೇರಿ ಬಾರಿಸಿದ್ದ ಎಂಟಿಬಿ ಈ ಬಾರಿಯೂ ಅದೇ ರೀತಿ ಗೆಲುವು ಸಿಗುತ್ತಾ ಎಂದು ಕಾಯುತ್ತಿದ್ದ ಎಂಟಿಬಿಗೆ ಈ ಫಲಿತಾಂಶ ನೋಡಿ ಆಘಾತಗೊಂಡಿದ್ದಾರೆ. ಸೋಲಿಗೆ ಕಾರಣರಾದ ಶರತ್ ಬಚ್ಚೇಗೌಡ ಬಗ್ಗೆ ಫೋನ್ ಮೂಲಕವೇ ಬಿಜೆಪಿ ನಾಯಕರನ್ನು ತರಾಟೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಪ್ರತಿ ದಿನ ಬೆಂಬಲಿಗರಿಂದ ಗಿಜುಗುಡುತ್ತಿದ್ದ ಎಂಟಿಬಿ ನಿವಾಸದಲ್ಲಿ ಇಂದು ನಿರವ ಮೌನ ಆವರಿಸಿದೆ. ಎಂಟಿಬಿ ಸಂತೈಸಲು ಯಾರೂ ಇಲ್ಲ. ಯಾರೂ ಬಂದಿಲ್ಲ. ಒಬ್ಬರೇ ಕೂತು ಸೋಲಿನ ಪರಾಮರ್ಶೆಯನ್ನು ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *