ಬೆಂಗಳೂರು: ಕರ್ನಾಟಕ ಪ್ರವಾಸಕ್ಕೂ ಹಿಂದಿನ ದಿನವೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ರೆಡ್ಡಿ, ಯಡಿಯೂರಪ್ಪ ಬಾಣ ಪ್ರಯೋಗಿಸಿದ್ದಾರೆ.
ಹೌದು, ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕರ್ನಾಟಕವನ್ನು ಲೂಟಿ ಮಾಡಿದ್ದ ಯಡಿಯೂರಪ್ಪ ಮತ್ತು ರೆಡ್ಡಿ ಸಹೋದರರನ್ನು ನಮ್ಮ ಸರ್ಕಾರ ಶಿಕ್ಷಿಸಿತ್ತು. ಆದ್ರೆ ಮೋದಿ, ಈಗ 8 ಮಂದಿಯನ್ನು ಜೈಲಿನಿಂದ ನೇರವಾಗಿ ವಿಧಾನಸೌಧಕ್ಕೆ ಕರ್ಕೊಂಡು ಬರ್ತಿದ್ದಾರೆ. ಇದು ಪ್ರಾಮಾಣಿಕ ಕನ್ನಡಿಗರು ಮತ್ತು ಬಸವಣ್ಣನವರ ಸಿದ್ಧಾಂತಕ್ಕೆ ಮಾಡಲಾದ ಅವಮಾನ ಅಂತ ಟ್ವೀಟಿಸಿದ್ದಾರೆ.
ನಿನ್ನೆಯಷ್ಟೇ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಲೇವಡಿ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಹುಲ್ ಗಾಂಧಿ ಜೊತೆ 15 ನಿಮಿಷದ ಚರ್ಚೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ. ರಾಹುಲ್ ಸವಾಲನ್ನು ಎದುರಿಸಲು ಮೋದಿಗೆ ಧೈರ್ಯವಿಲ್ಲ ಅಂತ ಹೇಳಿದ್ದರು.
When in power, Yeddyurappa and Reddy Brothers looted Karnataka. Our Govt. brought them to justice.
Now Mr Modi is trying to take 8 of them from jail, into the Vidhan Sabha.
This is an insult to every honest citizen, to Karnataka and to the spirit of Basavanna.
— Rahul Gandhi (@RahulGandhi) April 25, 2018