ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಸಂಸದ ತೇಜಸ್ವಿ ಸೂರ್ಯ ದಂಪತಿ ಭೇಟಿ

Public TV
1 Min Read

ಚಿಕ್ಕಮಗಳೂರು: ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಸದ ತೇಜಸ್ವಿ ಸೂರ್ಯ (Tejasvi Surya) ದಂಪತಿ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಳಸ ತಾಲೂಕಿನ ಆಧಿಶಕ್ತ್ಯಾತ್ಮಕ ಹೊರನಾಡು (Horanadu) ಅನ್ನಪೂರ್ಣೇಶ್ವರಿ ದೇಗುಲಕ್ಕೆ ಭೇಟಿ ನೀಡಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ದಂಪತಿಗೆ ದೇವಸ್ಥಾನದ ಆಡಳಿತ ಮಂಡಳಿ ಕೂಡ ಆತ್ಮೀಯವಾಗಿ ಸ್ವಾಗತ ಕೋರಿದೆ. ಕುಟುಂಬ ಸಮೇತರಾಗಿ ಆಗಮಿಸಿರುವ ತೇಜಸ್ವಿ ಸೂರ್ಯ ದಂಪತಿ ಹೊರನಾಡು ಅನ್ನಪೂರ್ಣೇಶ್ವರಿಗೆ ವಿಶೇಷ ಪೂಜೆ ಮಾಡಿಸಿ ದರ್ಶನ ಪಡೆದಿದ್ದಾರೆ. ಹೊರನಾಡು ಕ್ಷೇತ್ರದ ಧರ್ಮ ಕರ್ತರಾದ ಭೀಮೇಶ್ವರ ಜೋಶಿ ಅವರು ತೇಜಸ್ವಿ ಸೂರ್ಯ ದಂಪತಿಗೆ ಆಶೀರ್ವಾದ ಮಾಡಿದ್ದಾರೆ. ಇದನ್ನೂ ಓದಿ: Mysuru | ಕ್ರಿಕೆಟ್ ಪಂದ್ಯ ಗೆಲ್ಲಿಸಿದ್ದ ಯುವಕ ಅನುಮಾನಾಸ್ಪದ ಸಾವು – ಕೊಲೆ ಶಂಕೆ

ತೇಜಸ್ವಿ ಸೂರ್ಯ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯವರು. ಚಿಕ್ಕಮಗಳೂರಿನಲ್ಲಿ ಅವರ ಅಜ್ಜಿಯ ಮನೆ ಇದ್ದು, ತರೀಕೆರೆಯಲ್ಲಿ ಅವರ ಸಂಬಂಧಿಕರ ಮನೆ ಕೂಡ ಇದೆ. ತೇಜಸ್ವಿ ಸೂರ್ಯ ತನ್ನ ಬಾಲ್ಯದ ದಿನಗಳನ್ನು ಚಿಕ್ಕಮಗಳೂರು ಹಾಗೂ ತರೀಕೆರೆಯಲ್ಲಿ ಕಳೆದಿದ್ದರು. ಇದೀಗ, ಸಂಸದರಾದ ಬಳಿಕವೂ ಕೂಡ ಕುಟುಂಬದ ಸಭೆ ಸಮಾರಂಭಗಳಿಗೆ ಬಂದು ಹೋಗುತ್ತಾರೆ. ಇದನ್ನೂ ಓದಿ: ಐಪಿಎಲ್‌ಗೆ ಸೆಡ್ಡು ಹೊಡೆಯಲು ಸೌದಿ ಪ್ಲ್ಯಾನ್‌ – ʻಗ್ರ್ಯಾಂಡ್ ಸ್ಲಾಮ್‌ʼ ಕ್ರಿಕೆಟ್‌ಗೆ 4,347 ಕೋಟಿ ಹೂಡಿಕೆಗೆ ಚಿಂತನೆ

Share This Article