ಅಧಿಕಾರದಲ್ಲಿದ್ದಾಗ ನಿಮ್ಮ ಗಂಡಸ್ತನ ಎಲ್ಲಿ ಹೋಗಿತ್ತು: ರೇಣುಕಾಚಾರ್ಯ

Public TV
1 Min Read

ಬೆಂಗಳೂರು: ಅಧಿಕಾರದಲ್ಲಿದ್ದಾಗ ನಿಮ್ಮ ಗಂಡಸ್ತನ, ಪೌರುಷ ಎಲ್ಲಿ ಹೋಗಿತ್ತು ಎಂದು ಹೇಳುವ ಮೂಲಕ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರ ಇದ್ದಾಗ ನಿಮ್ಮ ಗಂಡಸ್ತನ, ಪೌರುಷ ಎಲ್ಲಿ ಹೋಗಿತ್ತು? ಅಧಿಕಾರ ಇಲ್ಲದಿದ್ದಾಗ ತೋರಿಸುತ್ತಿದ್ದೀರಲ್ಲ. ರಾಜಕಾರಣದ ದೊಂಬರಾಟ ನಿಲ್ಲಿಸಿ. ಯಾವುದೇ ಕಾರಣಕ್ಕೂ ನೀವು ಅಧಿಕಾರಕ್ಕೆ ಬರುವುದಿಲ್ಲ. ನಮ್ಮ ಸರ್ಕಾರ ಯೋಜನೆ ಅನುಷ್ಠಾನ ಮಾಡಲು ಬದ್ಧವಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಯೋಮಿತಿ ಏರಿಕೆ ಭೀತಿ- ಮುಸ್ಲಿಮರು ತರಾತುರಿ ಲಗ್ನ

ಮೋದಿಯವರು ತಂದ ಯೋಜನೆ, ಸಾಧನೆ ಜನರ ಮುಂದೆ ಇಟ್ಟಿದ್ದೇನೆ. ಯಡಿಯೂರಪ್ಪ ನೇತೃತ್ವದಲ್ಲಿ ಕೆಲಸ ಕಾರ್ಯಗಳನ್ನು ಜನರಿಗೆ ತಿಳಿಸಿದ್ದೇನೆ. ಬೊಮ್ಮಾಯಿ ಅವರ ಕೆಲಸ ಕಾರ್ಯಗಳನ್ನು ಜನರಿಗೆ ತಿಳಿಸಿದ್ದೇನೆ. ನಾನು ಹೊನ್ನಾಳಿ- ನ್ಯಾಮತಿ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ವಿವಿಧ ಯೋಜನೆಗಳ ಆದೇಶ ಪತ್ರ ಕೊಡುವ ಕಾರ್ಯಕ್ರಮ ಮಾಡಿದ್ದಾಗ ನನಗೆ ಮತ ಕೊಡಿ, ಕೈ ಎತ್ತಿ ಎಂದು ಕೇಳಿದ್ದೇನೆ. ಇದು ತಪ್ಪಾ ಪ್ರಶ್ನಿಸಿದರು. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ

ಎಳೆಯುವ ಎತ್ತಿಗೆ ಮೇವು ಹಾಕಿ ಅಂತ ಕೇಳಿದ್ದೇನೆ. ಕೊರೊನಾದಿಂದ ಮೃತಪಟ್ಟವರಿಗೆ ತಲಾ 10 ಸಾವಿರ ರೂ. ಕೊಟ್ಟಿದ್ದೆ. 10 ಸಾವಿರ ಕೊಡುವ ವಿಡಿಯೋ ವೈರಲ್ ಆಗಿದ್ಯಾ? ಹಾಗದರೆ ಕೋವಿಡ್ ಬಂದಾಗ ಎಲ್ಲಿ ಮಾಯವಾಗಿದ್ರಿ? ಜಾತಿ ರಾಜಕಾರಣ ಮಾಡಬೇಡಿ, ಹಣ ಕೊಡುತ್ತೇನೆ ಅಂತಾ ಹೇಳಿದ್ದೆ, ಕೊಟ್ಟಿದ್ದೇನೆ. ಮನೆ ಬಿದ್ದವರಿಗೂ ಹಣ ಕೊಟ್ಟಿದ್ದೇನೆ. ನನ್ನ ಕೈಲಾದ ಸಹಾಯ ಮಾಡಿದ್ದೇನೆ. ಇಂತಹ ಆರೋಪಕ್ಕೆ ಜಗ್ಗಲ್ಲ. ಯಡಿಯೂರಪ್ಪ, ಮೋದಿ ಹಾಗೂ ಬಸವರಾಜ್ ಬೊಮ್ಮಾಯಿ ಸಾಧನೆ ಬಗ್ಗೆ ಜನರಿಗೆ ಹೇಳಿದ್ದೇನೆ. ಮಾಡುವ ಕೆಲಸಕ್ಕೆ ಕೂಲಿ ಕೇಳಿದ್ದೇನೆ. ಮಾಡುವ ಕೆಲಸಕ್ಕೆ ಆಶೀರ್ವಾದ ಕೇಳಿದ್ದೇನೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *