ವಿಧಾನಸೌಧದಲ್ಲಿ ಹಣ ಸಿಕ್ಕಿರುವುದು ಕಾಂಗ್ರೆಸ್‍ಗೆ ಪುಟುಗೋಸಿ ಡೀಲ್- ಪ್ರತಾಪ್ ಸಿಂಹ ಲೇವಡಿ

Public TV
2 Min Read

ಮೈಸೂರು: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದಂತೆ ಕಾಂಗ್ರೆಸ್‍ಗೆ ಇದು ಪುಟುಗೋಸಿ ಡೀಲ್ ಆಗಿದೆ. ಅವರ ಪ್ರಕಾರ 26 ಲಕ್ಷ ರೂಪಾಯಿ ಯಾವ್ ಭ್ರಷ್ಟಾಚಾರವಾಗಿದೆ. 50 ಕೋಟಿ 100 ಕೋಟಿ 500 ಕೋಟಿ ಹಣ ಲಪಟಾಯಿಸೋ ಕಾಂಗ್ರೆಸ್ಸಿಗರಿಗೆ 26 ಲಕ್ಷ ಹಣವೇ ಅಂತ ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಹಣ ಸಿಕ್ಕ ವಿಚಾರದ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನೇಶ್ ಗುಂಡೂರಾವ್ ಅವರು ಸತ್ಯ ಒಪ್ಪಿಕೊಂಡಿದ್ದಾರೆ. ಸ್ಟೀಲ್ ಬ್ರಿಡ್ಜ್‍ನಂತಹ ಯೋಜನೆಯಲ್ಲಿ ಸಾವಿರಾರು ಕೋಟಿ ಬರುವಾಗ 26 ಲಕ್ಷ ಅವರಿಗೆ ಪುಟುಗೋಸಿನೆ. ಹೀಗಾಗಿ ದಿನೇಶ್ ಗುಂಡೂರಾವ್ ಅವರನ್ನ ನಾನು ಅಭಿನಂದಿಸುತ್ತೇನೆ ಅಂತ ಹೇಳಿದ್ರು.

ಶಬರಿಮಲೆ ಎಂಟ್ರಿ:
ಅಯ್ಯಪ್ಪನ ದೇವಾಲಯಕ್ಕೆ ಮಹಿಳೆಯರ ಎಂಟ್ರಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಂಸದರು, ಅಯ್ಯಪ್ಪನ ದೇವಾಲಯಕ್ಕೆ ಬರೋಕೆ ಮುಸ್ಲಿಂ ಮಹಿಳೆಯರು ಯಾರು ಅಂತ ಪ್ರಶ್ನಿಸಿದ್ರು. ಅವರೇನು ಅವರ ಮಸೀದಿಗಳಿಗೆ ನಮ್ಮನ್ನು ಬಿಟ್ಟುಕೊಳ್ಳುತ್ತಾರಾ, ನಮ್ಮ ಶ್ರದ್ಧಾ ಭಕ್ತಿಯನ್ನು ಹಾಳು ಮಾಡುದಕ್ಕೆ ಅವರಿಗೆ ಕುಮ್ಮಕ್ಕು ಕೊಟ್ಟವರು ಯಾರು, ಕಳ್ಳರ ರೀತಿ ಬುರ್ಕಾ ಧರಿಸಿಕೊಂಡು ದೇವಾಸ್ಥಾನಕ್ಕೆ ಹೋಗಿದ್ದೀರಲ್ಲ ನೀವೇನು ನಿಜವಾದ ಭಕ್ತರಾ, ನಿಮ್ಮ ಮುಖದಲ್ಲಿ ಶ್ರದ್ಧೆ ಭಕ್ತಿ ಇದೆಯಾ ಅಂತ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ರು.

ಕಮ್ಯೂನಿಸ್ಟ್ ಸರ್ಕಾರದ ಕುಮ್ಮಕ್ಕಿನಿಂದ ಇಂತದ್ದೆಲ್ಲ ನಡೆದಿದೆ. ಕಮ್ಯೂನಿಸ್ಟ್ ಸರ್ಕಾರವನ್ನ ಕೆಲವೆಡೆ ಬಿಜೆಪಿ ನಾಶ ಮಾಡಿದೆ. ಕೇರಳದಲ್ಲೂ ನಾಶವಾಗುವ ಕಾಲ ಬಂದಿದೆ. ಅಯ್ಯಪ್ಪನ ವಿಚಾರವೇ ಕಮ್ಯೂನಿಸ್ಟ್ ಪಕ್ಷವನ್ನ ನಾಶ ಮಾಡಲಿದೆ. ಪ್ರಪಂಚದಲ್ಲಿ ಹಿಂದೂ ಧರ್ಮ ಮಾತ್ರ ಮಹಿಳೆಯನ್ನ ಪೂಜ್ಯ ಸ್ಥಾನದಲ್ಲಿ ಇಟ್ಟಿದೆ. ಎಡಬಿಡಂಗಿಗಳಿಗೆ ಇದು ಅರ್ಥ ಆಗೋಲ್ಲ. ಬೇರೆ ಧರ್ಮದಲ್ಲಿ ಹೆಣ್ಣನ್ನ ಕೇವಲ ಸುಖ ನೀಡುವ ವಸ್ತುವಾಗಿ ಬಳಸಿದ್ದಾರೆ. ನಮ್ಮಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನ ಕೊಟ್ಟಿದೆ ಇದನ್ನ ಜನರು ಅರ್ಥ ಮಾಡಿಕೊಳ್ಳಬೇಕು ಅಂತ ಕಿಡಿಕಾರಿದ್ದಾರೆ.


ಲೋಕಸಭೆಗೆ ಸ್ಪರ್ಧೆ ಖಚಿತ:
ಮುಂದಿನ ಲೋಕಸಭೆಗೆ ಟಿಕೆಟ್ ನನಗೆ, ಗೆಲ್ಲೋದು ನಾನೇ. ಕೆಲ ಮಾಧ್ಯಮಗಳು ನನ್ನ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ. ವಾಪಸ್ ಪತ್ರಿಕೋದ್ಯಮಕ್ಕೆ ಬರಲಿ ಅಂತ ನನಗೆ ಟಿಕೆಟ್ ಇಲ್ಲ ಎಂದು ಬರೆಯುತ್ತಾರೆ. ಆದ್ರೆ ಈ ಬಾರಿ ಟಿಕೆಟ್ ನನಗೆ ಸಿಗುವುದು ಖಚಿತ, ಗೆಲ್ಲುವುದು ಖಚಿತವಾಗಿದೆ. ನಮ್ಮ ಬಿಜೆಪಿಯ 15 ಸಂಸದರಿಗೂ ಟಿಕೆಟ್ ಈಗಾಗಲೇ ಫೈನಲ್ ಆಗಿದೆ. ಯಡಿಯೂರಪ್ಪ ಹಾಗೂ ಹೈಕಮಾಂಡ್ ಕೆಲಸ ಮಾಡುವಂತೆ ಹೇಳಿದೆ. ಮೈಸೂರು ಕ್ಷೇತ್ರದ ಟಿಕೆಟ್ ಬಗ್ಗೆ ಯಾವುದೇ ಗೊಂದಲ ಬೇಡ ಅಂತ ಅವರು ಸ್ಪಷ್ಟಪಡಿಸಿದ್ರು.

ದಿನೇಶ್ ಗುಂಡೂರಾವ್ ಹೇಳಿದ್ದೇನು?:
ವಿಧಾನಸೌಧದಲ್ಲಿ ಹಣ ಪತ್ತೆಯಾದ ಬಗ್ಗೆ ಯಾರ ಮೇಲೂ ಆರೋಪ ಮಾಡುವುದು ಸರಿಯಲ್ಲ. ಅದರ ಬಗ್ಗೆ ಪೊಲೀಸರು ಖಂಡಿತವಾಗಿಯೂ ತನಿಖೆ ನಡೆಸುತ್ತಾರೆ ಎಂಬ ವಿಶ್ವಾಸ ಇದೆ. ಯಾರ ದುಡ್ಡು, ಯಾರು ತೆಗೆದುಕೊಂಡು ಹೋಗುತ್ತಿದ್ದರು..?, ಏನು ಅದರ ಮೂಲ ಎಂಬುದನ್ನೆಲ್ಲ ತಿಳಿದುಕೊಳ್ಳಬೇಕಾಗುತ್ತದೆ.

30 ಸಾವಿರ ಕೋಟಿ ಹಗರಣಕ್ಕೆ ಒಂದು ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿ ಮಾಡಿ ಅಂದ್ರೂ ಒಪ್ಪಿಕೊಳ್ಳುತ್ತಿಲ್ಲವಲ್ಲ. ಈ ಮಧ್ಯೆ ಇದ್ಯಾವುದು 20 ಲಕ್ಷ ರೂ. ಪುಟುಗೋಸಿ. ಒಟ್ಟಿನಲ್ಲಿ ಈ ಬಗ್ಗೆ ಉನ್ನತಮಟ್ಟದಲ್ಲಿ ತನಿಖೆ ಆಗಬೇಕು. ಯಾರಾದ್ರು ನಮ್ಮ ಪಕ್ಷದವರು ಇದರಲ್ಲಿ ಭಾಗಿಯಾಗಿದ್ದರೆ, ಕಾರಣಕರ್ತರು ಇದ್ದರೆ ತೀಕ್ಷಣವಾದ ಕ್ರಮ ಕೈಗೊಳ್ಳುತ್ತೇವೆ ಅಂತ ಗುಂಡೂರಾವ್ ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *