ನನಗೆ ಸೋಂಬೇರಿ ಅಂದವರನ್ನ ಜನ ಕಾಡಿಗೆ ಕಳಿಸಿದ್ದಾರೆ: ನಳೀನ್ ಕುಮಾರ್ ತಿರುಗೇಟು

Public TV
1 Min Read

ಮಂಗಳೂರು: ಸಂಸದ ಕಟೀಲ್ ಸೋಂಬೇರಿ ಎಂಬ ರಮಾನಾಥ ರೈ ಹೇಳಿಕೆಗೆ ಸಂಸದ ನಳೀನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಯಾರು ಸೋಂಬೇರಿ ಎಂಬುದನ್ನ ಕಳೆದ ಚುನಾವಣೆಯಲ್ಲಿ ಜನರು ತೋರಿಸಿದ್ದಾರೆ. ಜನರು ಅವರನ್ನ ಕಾಡಿಗೆ ಕಳುಹಿಸಿದ್ದಾರೆ. ಕಳೆದ 30 ವರ್ಷಗಳಲ್ಲಿ ತಾನು ಸಚಿವನಾಗಿದ್ದೇನೆ ಎನ್ನುವುದು ಅವರ ಸಾಧನೆ. ಎಲ್ಲಾ ವಿಷಯದಲ್ಲಿ ರಮಾನಾಥ ರೈ ಸರ್ವಜ್ಞ ಎಂದು ತಿಳಿದುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಓರ್ವ ಸೋಮಾರಿ, ಇಂತಹ ಲೋಕಸಭಾ ಸದಸ್ಯರನ್ನು ನಾನು ನೋಡಿಲ್ಲ. ಯಾರೋ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ತಾವೇ ಮಾಡಿದ್ದಾಗಿ ನಳಿನ್ ಕುಮಾರ್ ಹೇಳುತ್ತಿದ್ದಾರೆ. ನಳಿನ್ ಅವರಿಗೆ ಕೆಲಸ ಮಾಡುವ ವಿಧಾನವೇ ಗೊತ್ತಿಲ್ಲ. ಹೀಗಾಗಿ ಕೋಮು ಪ್ರಚೋದನೆ ಭಾಷಣ ಮಾಡುವುದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳದೆ ಅದಕ್ಕೆ ಮತ್ತಷ್ಟು ಎಣ್ಣೆ ಸುರಿದು ಗಲಾಟೆ ಮಾಡಿಸುವುದು ಮಾತ್ರ ಅವರಿಗೆ ಗೊತ್ತಿದೆ ಎಂದು ಮಾಜಿ ಅರಣ್ಯ ಸಚಿವ ರಮಾನಾಥ ರೈ ವ್ಯಂಗ್ಯವಾಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *