1 ವರ್ಷದ ಮಗನನ್ನೇ ಸೀಮೆಎಣ್ಣೆ ಸುರಿದು ಸುಟ್ಟು ಕೊಂದ್ಳು ಪಾಪಿ ತಾಯಿ!

Public TV
1 Min Read

ಚಿಕ್ಕಬಳ್ಳಾಪುರ: ಹೆತ್ತ ತಾಯಿಯೇ 1 ವರ್ಷದ ಮಗನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿರೋ ಹೃದಯವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕೇಶವಾರ ಗ್ರಾಮದಲ್ಲಿ ನಡೆದಿದೆ.

1 ವರ್ಷದ ವಿನಯ್ ಕೊಲೆಯಾದ ದುರ್ದೈವಿ ಪುಟಾಣಿ. ಈ ಮಗುವಿನ ತಾಯಿ ನಿರ್ಮಲಾ ಜನ್ಮ ಕೊಟ್ಟ ಮಗನ ಮೇಲೆಯೇ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಬಳಿಕ ತಾನೇ ಮನೆಯಿಂದ ಕೆಳಗಡೆ ಓಡಿ ಬಂದು ಅಯ್ಯೋ.. ಅಯ್ಯೋ.. ಕಾಪಾಡಿ.. ನನ್ನ ಮಗನನ್ನ.. ದೆವ್ವ ಕೊಂದು ಬಿಟ್ಟಿದೆ ಅಂತ ಕೂಗಿಕೊಂಡಿದ್ದಾಳೆ. ಆತಂಕಗೊಂಡ ಗ್ರಾಮಸ್ಥರು ಮನೆಗೆ ಹೋಗಿ ಗಮನಿಸಿದಾಗ ಪಟ್ಟ ಮಗು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆದ್ರೆ ಇದೆಲ್ಲಾ ಮಾಡಿದ್ದು ಮಾತ್ರ ನಾನಲ್ಲ ದೆವ್ವ ಅಂತಾ ನಿರ್ಮಲಾ ಹೇಳುತ್ತಿದ್ದಾಳೆ.

ಮೂಲತಃ ಆಂಧ್ರದ ಪುಂಗನೂರು ಮೂಲದ ರಾಜೇಶ್ ಹಾಗೂ ನಿರ್ಮಲ ಕಳೆದ ಆರು ತಿಂಗಳ ಹಿಂದೆಯಷ್ಟೇ ಕೇಶವಾರ ಗ್ರಾಮಕ್ಕೆ ಬಂದು ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದರು. ಗಂಡ ರಾಜೇಶ್ ಬೋರ್ ವೆಲ್ ರೀ ಡ್ರಿಲ್ಲಿಂಗ್ ಕೆಲಸ ಮಾಡುತ್ತಿದ್ದು ಮನೆಯಲ್ಲಿ ಮಗುವಿನ ಜೊತೆ ನಿರ್ಮಲ ಮಾತ್ರ ಇರುತ್ತಿದ್ದಳು. ಹೀಗೆ ಮಗುವಿನ ಜೊತೆ ಒಂಟಿಯಾಗಿದ್ದ ನಿರ್ಮಲಾಳಿಗೆ ಅದೇನಾಯ್ತೋ ಏನೋ ತಾನು 9 ತಿಂಗಳು ಹೊತ್ತು ಎದೆಯಾಲು ಉಣಿಸಿ ಬೆಳೆಸಿದ ಮಗನನ್ನೆ ಬಲಿ ಪಡೆದುಕೊಂಡಿದ್ದಾಳೆ. ಮನೆಯಲ್ಲಿನ ದೇವರ ಫೋಟೋ ಇದ್ದಕ್ಕಿದತೆ ಓಡೆದು ಹೋಗಿದೆ. ದೆವ್ವ ಮನೆಗೆ ಬಂದು ಮೊದಲು ಮಗುವನ್ನ ಕೊಂದು, ನಂತ್ರ ನನ್ನನ್ನ ನೇಣಿಗೆ ಹಾಕಲು ಪ್ರಯತ್ನಿಸಿತ್ತು.. ನಾನು ಆಗ ತಪ್ಪಿಸಿಕೊಂಡು ಓಡಿ ಹೋದೆ ಅಂತ ಗಂಡನ ಬಳಿ ಹೇಳಿದ್ದಾಳೆ. ಆದ್ರೆ ಇತ್ತ ಗಂಡ ರಾಜೇಶ್, ನನ್ನ ಹೆಂಡಿತಿ ಗರ್ಭಿಣಿ ಆಗಿದ್ದಾಗಲೂ ಹೀಗೆ ವಿಚಿತ್ರವಾಗಿ ವರ್ತಿಸುತ್ತಿದ್ದಳು.

ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಮಗುವಿನ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ಶವಾಗಾರಕ್ಕೆ ಸಾಗಿಸಿದ್ದಾರೆ. ಮತ್ತೊಂದೆಡೆ ಮಗುವನ್ನ ಕೊಂದ ಪಾಪಿ ನಿರ್ಮಲಾಳನ್ನ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *