ನಾಳೆ ಮದುವೆ ಆಗ್ಬೇಕಿದ್ದ ಬಾಮೈದನ ಮೇಲೆ ಮಚ್ಚು ಬೀಸಿದ ಬಾವ

Public TV
1 Min Read

– ಅತ್ತೆಯ ಎರಡೂ ಕೈಗಳಿಗೂ ಅಳಿಯನಿಂದ ಮಚ್ಚೇಟು

ಮೈಸೂರು: ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿಯೋರ್ವ ಗುರುವಾರ ಮದುವೆಯಾಗಬೇಕಿದ್ದ ತನ್ನ ಬಾಮೈದನ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ, ಅತ್ತೆಯ ಎರಡು ಕೈಗಳಿಗೂ ಮಚ್ಚಿನಿಂದ ಗಾಯಗೊಳಿಸಿದ ಘಟನೆ ಮೈಸೂರಿನ ಎಚ್.ಡಿ ಕೋಟೆಯ ಯರಹಳ್ಳಿಯಲ್ಲಿ ನಡೆದಿದೆ.

ಆರೋಪಿಯನ್ನು ಕೆಂಡಗಣ್ಣ ಎಂದು ಗುರುತಿಸಲಾಗಿದ್ದು, ತನ್ನ ಬಾಮೈದ ಯರಹಳ್ಳಿ ನಿವಾಸಿ ಮನು ಹಾಗೂ ಅತ್ತೆ ಹೇಮಾವತಿ ಮೇಲೆ ಆರೋಪಿ ಹಲ್ಲೆ ನಡೆಸಿದ್ದಾನೆ. ಮಲಗಿದ್ದ ವೇಳೆ ಅತ್ತೆ, ಬಾಮೈದನ ಮೇಲೆ ಕೆಂಡಗಣ್ಣ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಗಾಯಗೊಂಡ ಮನು, ಹೇಮಾವತಿ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ಗುರುವಾರ ಮನು ವಿವಾಹ ನಡೆಯಬೇಕಿತ್ತು. ಮದುವೆ ಆಗಿ ಹೊಸ ಜೀವನಕ್ಕೆ ಕಾಲಿಡಬೇಕಿದ್ದ ಮನು ಸದ್ಯ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಕೆಂಡಗಣ್ಣ ಮಚ್ಚಿನಿಂದ ಹಲ್ಲೆ ನಡೆಸಿದ ಪರಿಣಾಮ ಮನು ಕತ್ತಿನ ಮೇಲ್ಭಾಗದಲ್ಲಿ ಗಾಡವಾಗಿ ಮಚ್ಚಿನ ಏಟು ಬಿದಿದ್ದು, ಮನು ಕಿವಿ ಕೂಡ ಕಟ್ ಆಗಿದೆ. ಇತ್ತ ಅತ್ತೆಯ ಎರಡೂ ಕೈಗಳಿಗೂ ಕೆಂಡಗಣ್ಣ ಮಚ್ಚಿನಿಂದ ಗಾಯಗೊಳಿದ್ದಾನೆ.

ಈ ಸಂಬಂಧ ಮೈಸೂರಿನ ಎಚ್.ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದರಿಂದ ಗುರುವಾರ ನಡೆಯಬೇಕಿದ್ದ ಮನು ವಿವಾಹ ನಿಂತು ಹೋಗಿದೆ.

Share This Article
Leave a Comment

Leave a Reply

Your email address will not be published. Required fields are marked *