ಮುಗ್ಧ ಮಕ್ಕಳಿಬ್ಬರನ್ನು ಕೊಂದು ತಾಯಿ ನೇಣಿಗೆ ಶರಣು!

Public TV
1 Min Read

ಚಿಕ್ಕಬಳ್ಳಾಪುರ: ಇಬ್ಬರು ಮಕ್ಕಳನ್ನ ಕೊಂದು ಬಳಿಕ ತಾಯಿಯೂ ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.

8 ವರ್ಷದ ಮಗ ಶಮಂತ್ ಹಾಗೂ 2 ವರ್ಷದ ಶಾನವಿ ಮೃತ ದುರ್ದೈವಿ ಮಕ್ಕಳು. ಉಷಾ(30) ತನ್ನಿಬ್ಬರು ಮಕ್ಕಳನ್ನ ಕೊಂದು ಆತಹತ್ಯೆಗೆ ಶರಣಾದ ತಾಯಿ.

ಉಷಾ ಪತಿ ಅಶ್ವತ್ಥನಾರಾಯಣ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಈ ಕುಟುಂಬ ನಗರದ ಮುನಿಸಿಪಾಲ್ ಕಾಲೇಜು ಬಳಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿತ್ತು. ಆತ್ಮಹತ್ಯೆಗೂ ಮುನ್ನ ಉಷಾ ಡೆತ್ ನೋಟ್ ಬರೆದಿದ್ದು ತನ್ನ ಸಾವಿಗೆ ಯಾರೂ ಕಾರಣ ಅಲ್ಲ ಅಂತ ಬರೆದಿದ್ದಾಳೆ ಎಂಬುದಾಗಿ ಮಾಹಿತಿ ತಿಳಿದುಬಂದಿದೆ.

ಕಾರಣವೇನು..?
ಜ್ಯೋತಿಷಿ ನಿನ್ನ ಮಕ್ಕಳ ಭವಿಷ್ಯ ಸರಿ ಇಲ್ಲ ಎಂದು ಹೇಳಿದ್ದಕ್ಕೆ ಕಳೆದ 15 ದಿನಗಳಿಂದ ತಾಯಿ ಉಷಾ ಖಿನ್ನತೆಗೆ ಓಳಗಾಗಿದ್ದಳಂತೆ. ಪತಿ ಈ ಬಗ್ಗೆ ಬುದ್ಧಿವಾದ ಹೇಳಿದ್ದರೂ ಇಂದು ಅಶ್ವತ್ಥ ನಾರಾಯಣ ಅವರು ಮನೆಯಲ್ಲಿ ಇಲ್ಲದ ವೇಳೆ ಮಕ್ಕಳಿಗೆ ಮೊದಲು ನಿದ್ರೆ ಮಾತ್ರೆ ಹಾಕಿ ತದನಂತರ ಕತ್ತುಹಿಸುಕಿ ಕೊಲೆ ಮಾಡಿ ಬಳಿಕ ತಾನೂ ನೇಣಿಗೆ ಶರಣಾಗಿದ್ದಾಳೆ.

ಈ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಪತಿ ಅಶ್ವಥ್ ನಾರಾಯಣರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *