ಸಿಎಂ ನಿವಾಸದ ಮುಂದೆ ಜಮಾಯಿಸಿದ 50ಕ್ಕೂ ಹೆಚ್ಚು ರೈತರು!

Public TV
1 Min Read

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಭೇಟಿಗೆ ಮೈಸೂರು ಜಿಲ್ಲೆಯ ಸುಮಾರು 50ಕ್ಕೂ ಹೆಚ್ಚು ರೈತರು ಬಂದಿದ್ದಾರೆ.

ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ರೈತರು ಬಂದಿದ್ದಾರೆ. ರೈತರು 2002-2003 ರಲ್ಲಿ ರೈತರು ಸಾಲ ಹೆಚ್ಚು ಮಾಡಿದ್ದಾರೆ. 2002 ರಿಂದ ಸಾಲ ಮನ್ನಾ ಮಾಡಬೇಕು ಎಂದು ಮನವಿ ಮಾಡಿದ್ದರು. ಆದರೂ ಇದುವರೆಗೂ ಸಾಲ ಮನ್ನಾ ಮಾಡಿಲ್ಲವಾದ್ದರಿಂದ ಮನವಿ ಮಾಡಲು ಮೈಸೂರು ಜಿಲ್ಲೆ ರೈತರು ಬಂದಿದ್ದರು.

ಸಿಎಂ ಭೇಟಿ ಮಾಡಲು ಬಿಡಿ, ಸಾಲ ಮನ್ನ ವಿಚಾರವಾಗಿ ಮಾತನಾಡಬೇಕು. ಮನವಿ ಪತ್ರ ನೀಡಲು ಬಂದಿದ್ದೇವೆ ಎಂದು ಅಧಿಕಾರಿಗಳಿಗೆ ರೈತರು ಒತ್ತಾಯ ಮಾಡುತ್ತಿದ್ದರು. ಆದರೆ ಅಧಿಕಾರಿಗಳು ರೈತರ ಮನವೊಲಿಸುವ ಯತ್ನ ಮಾಡಿದ್ದರು. ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಲೇಬೇಕು ಎಂದು ರೈತರು ಪಟ್ಟು ಹಿಡಿದಿದ್ದು, ಲಾಠಿ ಚಾರ್ಜ್ ಮಾಡಿ ಬೇಕಿದ್ದರೆ, ನಾವು ಸಿಎಂ ಭೇಟಿ ಮಾಡಲೇಬೇಕು ಎಂದು ರೈತರು ಆಗ್ರಹಿಸಿದ್ದರು.

ಅಧಿಕಾರಿಗಳು ಕೊನೆಗೆ ರೈತರ ಆಗ್ರಹಕ್ಕೆ ಮಣಿದು ಕೆಲ ರೈತರನ್ನು ಸಿಎಂ ಕುಮಾರಸ್ವಾಮಿ ಭೇಟಿಗೆ ಮನೆಯೊಳಗೆ ಕಳುಹಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *