ಆಗಸ್ಟ್‌ನಲ್ಲಿ ಮಳೆ ಕೊರತೆ – ಯಾವ ಜಿಲ್ಲೆಯಲ್ಲಿ ಎಷ್ಟು ಕೊರತೆಯಾಗಿದೆ?

Public TV
1 Min Read

ಬೆಂಗಳೂರು: ರಾಜ್ಯ (Karnataka) ಆಗಸ್ಟ್ ತಿಂಗಳಲ್ಲಿ ತೀವ್ರ ಮಳೆ (Rain) ಕೊರತೆ ಎದುರಿಸಿತ್ತಿದೆ. ಈ ತಿಂಗಳಲ್ಲಿ ಸುಮಾರು 73% ರಷ್ಟು ಮಳೆಯ ಕೊರತೆ ಉಂಟಾಗಿದೆ. ವಾಡಿಕೆಯ ಪ್ರಕಾರ ಆ.29 ರವರೆಗೆ ರಾಜ್ಯದಲ್ಲಿ 211 ಎಂಎಂ ಮಳೆಯಾಗಬೇಕಾಗಿತ್ತು. ಆದರೆ 58 ಎಂಎಂ ಮಾತ್ರ ಮಳೆಯಾಗಿದೆ.

ಈ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಉಸ್ತುವಾರಿ ಕೇಂದ್ರ (KSNDMC) ಮಳೆಯ ದಾಖಲಾತಿ ಬಿಡುಗಡೆ ಮಾಡಿದೆ. ದಾಖಲೆಯಲ್ಲಿ ಮಳೆಯ ಕೊರತೆಯಿಂದಾಗಿ ಈ ತಿಂಗಳಲ್ಲಿ ತೀವ್ರ ತಾಪಮಾನ ಕೂಡ ಏರಿಕೆಯಾಗಿದೆ ಎಂದು ತಿಳಿಸಿದೆ. ಇದು ರಾಜ್ಯದ ಜನರ ಆತಂಕಕ್ಕೆ ಸಹ ಕಾರಣವಾಗಿದೆ. ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಆಗಮನ – ಬಿಎಸ್‌ವೈ, ಎಂಬಿಪಿ ಪ್ರಯಾಣ

ಬೆಂಗಳೂರಿನಲ್ಲಿ (Bengaluru) ವಾಸ್ತವಿಕವಾಗಿ 116 ಎಂಎಂ ಮಳೆ ಆಗಬೇಕಿತ್ತು. ಆದರೆ ಈಗ 24 ಎಂಎಂ ಮಾತ್ರ ಮಳೆಯಾಗಿದೆ. ಚಿಕ್ಕ ಬಳ್ಳಾಪುರದಲ್ಲಿ 103 ಎಂಎಂ ವಾಸ್ತವಿಕ ಮಳೆ ಬೀಳಬೇಕಿತ್ತು. ಆದರೆ ಈಗ 16 ಎಂಎಂ ಮಾತ್ರ ಮಳೆ ಸುರಿದಿದೆ. ಕಲುಬುರ್ಗಿಯಲ್ಲಿ 148 ಎಂಎಂ ಮಳೆ ನಿರೀಕ್ಷೆ ಇತ್ತು, ಈಗ 29 ಎಂಎಂ ಮಳೆಯಾಗಿದೆ. ಮಲೆನಾಡಿನ ಭಾಗವಾದ ಶಿವಮೊಗ್ಗದಲ್ಲಿ ವಾಡಿಕೆಯಂತೆ ಯಾವಾಗಲೂ 535 ಎಂಎಂ ಮಳೆಯಾಗುತ್ತಿತ್ತು. ಆದರೆ ಈ ವರ್ಷ 106 ಎಂಎಂ ಮಾತ್ರ ಮಳೆ ಆಗಿದೆ. ಕೊಡಗಿನಲ್ಲಿ 551 ಎಂಎಂ ವಾಸ್ತವಿಕ ಮಳೆಯ ವಾಡಿಕೆ ಇತ್ತು, ಆದರೆ 102 ಎಂಎಂ ಮಳೆ ಮಾತ್ರ ಬಿದ್ದಿದೆ ಎಂದು ಕೆಎಸ್‍ಎನ್‍ಡಿಎಂಸಿ ತಿಳಿಸಿದೆ. ಇದನ್ನೂ ಓದಿ: ಮಳೆಗಾಗಿ ಮಕ್ಕಳ ಮದುವೆ ಮಾಡಿಸಿದ ಗ್ರಾಮಸ್ಥರು

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್