ಸಾವಿನ ಮನೆಗೆ ತೆರಳಿ ತನ್ನದೇ ಭಾಷೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಸಾಂತ್ವಾನ ಹೇಳಿದ ಕಪಿರಾಯ

Public TV
1 Min Read

ಗದಗ: ಮನುಷ್ಯ ಮರಣಹೊಂದಿದಾಗ ಬಂಧು-ಬಾಂಧವರು, ಮಿತ್ರರು ಬೇಗ ಬರುವುದಿಲ್ಲ. ಆದರೆ ಕೋತಿಯೊಂದು ಸಾವಿನ ಮನೆಗೆ ತೆರಳಿ ತನ್ನದೇ ಭಾಷೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಸಾಂತ್ವಾನ ಹೇಳಿರುವ ಘಟನೆ ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ನಡೆದಿದೆ.

ನಾಗನಗೌಡ ಪಾಟೀಲ್(71) ಎಂಬವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಕುಟುಂಬದವರು ಅತೀವ ಶೋಕದಲ್ಲಿದ್ದರು. ಅಷ್ಟರಲ್ಲಿ ಕಪಿಯೊಂದು ಮೃತರ ಮನೆಗೆ ಧಾವಿಸಿದೆ. ಅರ್ಚಕರು ಪೂಜೆ ಸಲ್ಲಿಸುವ ವೇಳೆ ಶವದ ಬಳಿ ಸುಮ್ಮನೆ ಕೂತು ಶ್ರದ್ಧಾಂಜಲಿ ಸಲ್ಲಿಸಿದೆ.

ನಂತರ ಮನೆಯಿಂದ ಹೊರಬಂದು, ಮೃತನ ಹಿರಿಯ ಪುತ್ರ ಮರಿಗೌಡ ಅವರ ಪಕ್ಕದಲ್ಲಿ ಹಾಗೂ ಅವರ ಹೆಗಲೇರಿ ತಲೆಮೇಲೆ ಕೈಯಾಡಿಸಿದೆ. ಅವರ ಕಿವಿಯಲ್ಲಿ ತನ್ನದೆ ಭಾಷೆಯಲ್ಲಿ ಸಾಂತ್ವಾನ ಹೇಳಿದೆ. ಈ ವೇಳೆ ನೂರಾರು ಸಂಖ್ಯೆಯಲ್ಲಿ ಜನರಿದ್ದರೂ ಯಾರೋಬ್ಬರಿಗೂ ತೊಂದರೆ ಮಾಡದೆ, ಕುಟುಂಬದವರಿಗೆ ಪ್ರೀತಿ ಕನಿಕರ ತೋರಿಸಿದೆ.

ಕಪಿರಾಯನ ವರ್ತನೆ ಸಾರ್ವಜನಿಕರನ್ನು ಒಂದು ವೇಳೆ ನಿಬ್ಬೆರಗಾಗುವಂತೆ ಮಾಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *