100 ಕೋಟಿ ರೂ. ಆಸೆಗೆ ಒಂದು ಮುಕ್ಕಾಲು ಕೋಟಿ ಹಣ ಕಳ್ಕೊಂಡ

Public TV
1 Min Read

ಬೆಂಗಳೂರು: ನೂರಾರು ಕೋಟಿ ವ್ಯವಹಾರ ಮಾಡುವ ಉದ್ಯಮಿಯೊಬ್ಬರು ಕಡಿಮೆ ಬಡ್ಡಿಯಲ್ಲಿ ನೂರು ಕೋಟಿ ಸಾಲ ಸಿಗುತ್ತದೆ ಎಂಬ  ಆಸೆಗೆ ಬರೋಬ್ಬರಿ ಒಂದು ಮುಕ್ಕಾಲು ಕೋಟಿ ಹಣ ಕಳೆದುಕೊಂಡಿದ್ದಾರೆ.

ಬೆಂಗಳೂರಿನ ಎಚ್‍ಎಸ್‍ಆರ್ ಲೇಔಟ್‍ನಲ್ಲಿರುವ ಆಂಧ್ರ ಮೂಲದ ಉದ್ಯಮಿ ಮಂತೇನಾ ವರುಣ್ ಗಾಂಧಿ ಅವರಿಗೆ ಹಣದ ಅವಶ್ಯಕತೆ ಇತ್ತು. ಇದೇ ವೇಳೆ ಎಚ್‍ಎಸ್‍ಆರ್ ಲೇಔಟ್ ನಲ್ಲಿರುವ ಫ್ಯೂಚರ್ ಕ್ರೆಸ್ಟ್ ವೆಂಚರ್ಸ್ ಕಂಪನಿ ಕಡಿಮೆ ಬಡ್ಡಿಗೆ ಸಾಲ ನೀಡುವ ವಿಚಾರ ತಿಳಿದ ಉದ್ಯಮಿ ಆ ಕಂಪನಿಯನ್ನು ಭೇಟಿ ಮಾಡಿದರು. ಇದನ್ನೂ ಓದಿ: ಸೈನಿಕರ ತವರು ಜಿಲ್ಲೆ ಕೊಡಗಿಗೆ ಅಮೋಘ ಕೊಡುಗೆ ನೀಡಿದ್ದರು ಬಿಪಿನ್ ರಾವತ್

ಈ ವೇಳೆ ನಮ್ಮದು ಇಂಟರ್ ನ್ಯಾಷನಲ್ ಕಂಪನಿ ನೂರು ಕೋಟಿ ಸಾಲ ನೀಡುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ನೂರು ಕೋಟಿ ಸಾಲ ತೆಗೆದುಕೊಳ್ಳುವ ಮುನ್ನ ಮೂರು ತಿಂಗಳ ಬಡ್ಡಿಯನ್ನು ಮುಂಗಡವಾಗಿ ನೀಡಬೇಕು ಎಂದು ಕಂಡಿಷನ್ ಹಾಕಿತ್ತು. ನೂರು ಕೋಟಿ ಸಾಲ ಕೊಡುತ್ತಿದ್ದಾರೆ, ಕೇವಲ ಮೂರು ತಿಂಗಳ ಬಡ್ಡಿ ತಾನೇ ಅಂತ ಮೂರು ತಿಂಗಳ ಬಡ್ಡಿ ಹಣ ಒಂದು ಕೋಟಿ ಎಂಬತ್ತೊಂದು ಲಕ್ಷ ಹಣವನ್ನು ಉದ್ಯಮಿ ವರುಣ್ ಗಾಂಧಿ ಆ ಕಂಪನಿಗೆ ಕಟ್ಟಿದ್ದರು.  ಇದನ್ನೂ ಓದಿ: ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಕ್ಯಾಪ್ಟನ್ ವರುಣ್ ಸಿಂಗ್ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ

POLICE JEEP

ಹಣ ತೆಗೆದುಕೊಂಡ ಫ್ಯೂಚರ್ ಕ್ರೆಸ್ಟ್ ವೆಂಚರ್ಸ್ ಕೆಲ ದಿನಗಳ ನಂತರ ಏಕಾಏಕಿ ಬಾಗಿಲು ಹಾಕಿದ್ದು, ಉದ್ಯಮಿಗೆ ಶಾಕ್ ನೀಡಿದೆ. ಈ ಸಂಬಂಧ ಎಚ್‍ಎಸ್‍ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಂಚಕರಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *