ದೇವಸ್ಥಾನದಿಂದ 1 ಲಕ್ಷಕ್ಕೂ ಹೆಚ್ಚು ಹಣ, 1.5 ಕೆ.ಜಿಯ ಬೆಳ್ಳಿ ಕಿರೀಟ ಕಳವು!

Public TV
1 Min Read

ಕೋಲಾರ: ನಗರದಲ್ಲಿರುವ ಲಕ್ಷ್ಮಿ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ರಾತ್ರಿ ಕಿಡಿಗೇಡಿಗಳು ಹುಂಡಿ ಕಳವು ಮಾಡಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗನಿಬಂಡೆ ಗ್ರಾಮದ ವೆಂಕಟರಮಣ ದೇವಾಲಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಕಳೆದ ರಾತ್ರಿ ದೇವಾಲಯದ ಬಾಗಿಲು ಮುರಿದು ಹುಂಡಿ ಕಳವು ಮಾಡಿದರುವ ಕಳ್ಳರು, ಸುಮಾರು 1 ಲಕ್ಷಕ್ಕೂ ಹೆಚ್ಚು ಹಣ ಮತ್ತು ದೇವರ ಮೇಲೆ ಅಲಂಕರಿಸಿದ್ದ 1.5 ಕೆ ಜಿಯ ಬೆಳ್ಳಿ ಕಿರೀಟ ಕಳವು ಮಾಡಿದ್ದಾರೆ.

ಇಂದು ಬೆಳಗ್ಗೆ ಪೂಜಾರಿ ಶ್ರೀನಾಥ್ ದೇವಾಲಯದ ಬಾಗಿಲು ತೆರೆದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ರಾಯಲ್ಪಾಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *