3 ದಶಕಗಳ ಕನಸು ಆಗ್ತಿದೆ ನನಸು- ನಾಳೆ ಕಲಬುರಗಿ-ಬೀದರ್ ರೈಲ್ವೆ ಯೋಜನೆಗೆ ಪ್ರಧಾನಿಯಿಂದ ಚಾಲನೆ

Public TV
1 Min Read

– ಹಳಿ ತಪ್ಪಿದ ಅನ್ನದಾತರ ಬದುಕು

ಕಲಬುರಗಿ: ಮೂರು ದಶಕಗಳ ಹಿಂದೆ ಘೋಷಿಸಲಾಗಿದ್ದ ಕಲಬುರಗಿ-ಬೀದರ್ ರೈಲು ಯೋಜನೆಗೆ ಕೊನೆಗೂ ಚಾಲನೆ ಸಿಗಲಿದೆ. ಈ ರೈಲು ಮಾರ್ಗವನ್ನು ಪ್ರಧಾನಿ ಮೋದಿಯವರು ಭಾನುವಾರದಂದು ಲೋಕಾರ್ಪಣೆ ಮಾಡಲಿದ್ದಾರೆ.

ಇದು ಉತ್ತರ ಕರ್ನಾಟಕದ ಮಂದಿಗೆ ಸಂತಸದ ಸುದ್ದಿಯಾದ್ರೂ ಹಳಿಗಾಗಿ ಭೂಮಿ ಕೊಟ್ಟ ಅನ್ನದಾತರ ಬದುಕು ಹಳಿ ತಪ್ಪಿದೆ. ಯೋಜನೆಗಾಗಿ ಕಲಬುರಗಿಯ 6 ಹಳ್ಳಿಗಳಲ್ಲಿ 271 ಎಕರೆ ಜಮೀನನ್ನು ವಶಪಡಿಸಿಕೊಂಡಿತ್ತು. ಆದ್ರೆ ರೈತರಿಗೆ ಕೊಟ್ಟಿದ್ದು ಮಾತ್ರ ಬಿಡಿಗಾಸು. ಅಂದ್ರೆ ಎಕೆರೆಗೆ ಬರೀ 80 ಸಾವಿರ ರೂಪಾಯಿ. ಇದರಿಂದ ಅವರಿಗೆ ಅಪಾರ ನಷ್ಟವಾಗಿದೆ.

ಇತ್ತ ಕಮಲಾಪುರದಲ್ಲಿ ಗುಂಟೆ ಲೆಕ್ಕಾಚಾರದಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಇದುವರೆಗೂ ಪರಿಹಾರ ಕೊಟ್ಟಿಲ್ಲ. ಈ ಬಗ್ಗೆ ಕಲಬುರಗಿ ಸಹಾಯಕ ಆಯುಕ್ತರಿಗೆ ಮನವಿ ಮಾಡಿದ್ರೂ ಪರಿಹಾರವಾಗಿಲ್ಲ. ರೈಲು ಯೋಜನೆ ವಿಷಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಿತ್ತಾಡುತ್ತಿವೆ. ಆದರೆ ಎರಡೂ ಪಕ್ಷಗಳಿಗೆ ರೈತರ ಜಮೀನಿಗೆ ನ್ಯಾಯಯುತ ಪರಿಹಾರ ಕೊಡಿಸಬೇಕೆಂಬ ಕಾಳಜಿ ಮಾತ್ರ ಇಲ್ಲ.

Share This Article
Leave a Comment

Leave a Reply

Your email address will not be published. Required fields are marked *