ಮೋದಿ ಚೈನಾ ವಸ್ತುವಿದ್ದಂತೆ, ಗ್ಯಾರಂಟಿ, ವಾರಂಟಿ ಇಲ್ಲ: ಇಬ್ರಾಹಿಂ ಲೇವಡಿ

Public TV
2 Min Read

ಗದಗ: ಪ್ರಧಾನಿ ಮೋದಿಯನ್ನು ಚೀನಾದ ವಸ್ತುಗಳಿಗೆ ಹೋಲಿಕೆ ಮಾಡಿ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ  ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.

ಜಿಲ್ಲೆಯ ನರಗುಂದದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಮೋದಿ ಚೀನಾ ವಸ್ತುವಿದ್ದಂತೆ. ಅದಕ್ಕೆ ವಾರಂಟಿ, ಗ್ಯಾರಂಟಿ ಇಲ್ಲ ಹೇಳಿ ಲೇವಡಿ ಮಾಡಿದರು.

ಆಜ್ ಬಿಜೆಪಿಕೋ ಕಥಮ್ ಕರನಾ ಹೈ. ಹಿಂದೂ ಮುಸಲ್ಮಾನ್ ಏಕ್ ಮಾಕೇ ಬಚ್ಚೆ ಜೈಸೇ ರಹೆಂಗೆ. ಮೋದಿಕೋ ಹಮ್ ಕಬಿಬೀ ಡರೆಂಗೆ ನಹಿ (ಬಿಜೆಪಿಯನ್ನು ಈಗ ಇಲ್ಲವಾಗಿಸಬೇಕು. ಹಿಂದೂ ಮತ್ತು ಮುಸ್ಲಿಮರು ಒಂದೇ ತಾಯಿ ಮಕ್ಕಳಂತೆ ಇರಬೇಕು. ಮೋದಿಗೆ ಯಾರು ಹೆದರುವ ಅವಶ್ಯಕತೆ ಇಲ್ಲ) ಎಂದರು.

ಕಮಲಕ್ಕೆ ಸೂರ್ಯೋದಯದ ಚಿಂತೆ, ಸಿದ್ದರಾಮಯ್ಯಗೆ ಜನ್ರ ಚಿಂತೆಯಾದರೆ ಯಡಿಯೂರಪ್ಪಗೆ ಶೋಭಕ್ಕನ ಚಿಂತೆ. ಶೋಭಾ ಕರಂದ್ಲಾಜೆಗೆ ಟಿಕೇಟ್ ಸಿಗದಿರುವುದಕ್ಕೆ ಯಡಿಯೂರಪ್ಪನಿಗೆ ಶಾಕ್ ಆಗಿದೆ ಎಂದು ಹೇಳಿದರು.

ನಿಮ್ಮೆದುರಿಗೆ ನಾವು ಕಂತಿ ಭಿಕ್ಷೆಗೆ ಬಂದಿದ್ದೇವೆ. ಐದು ವರ್ಷ ನುಡಿದಂತೆ ನಡೆದಿದ್ದೇವೆ. ಸಾವಿರಾರು ಮಂದಿಗೆ ದಾಸೋಹ ಕೊಟ್ರೆ ಅದು ದೊಡ್ಡ ಮಠವಾಗುತ್ತೆ. ಆದ್ರೆ ಸಿದ್ದರಾಮಯ್ಯ ಅವ್ರ ಮಠದಾಗ ಕೋಟ್ಯಾಂತರ ಜನರಿಗೆ ದಾಸೋಹ ನೀಡಲಾಗಿದೆ ಎಂದು ಹೊಗಳಿದರು.

ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇವಲ ಭಾಷಣಕ್ಕಷ್ಟೆ ಸೀಮಿತವಾಗಿದೆ. ಜೈಲು, ಬೇಲಿನ ಜನರನ್ನು ಕಟ್ಟಿಕೊಂಡು ಚುನಾವಣೆಗೆ ಸಜ್ಜಾಗಿದ್ದಾರೆ. ಅವರ ಆಟ ಕರ್ನಾಟಕದ ಟಗರಿನ ಮುಂದೇ ನಡೆಯುವುದಿಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರೇ ನಿಮಗೆ ಈ ಟಗರಿನ ಸಾಮರ್ಥ್ಯ ಗೊತ್ತಿಲ್ಲ. ಕಳಂಕ ರಹಿತ ಆಡಳಿತವನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಜಾತಿಯನ್ನು ಒಡೆದವರು ಬಿಜೆಪಿಗರು. ಸಂವಿಧಾನದಿಂದಲೇ ನಮಗೆ ವೋಟು ಹಾಗೂ ಸಮಾನತೆಯ ಹಕ್ಕು ದೊರೆತಿದೆ. 11 ನೇ ಶತಮಾನದಲ್ಲಿ ಬಸವಣ್ಣ ಹೇಳಿದ್ದನ್ನೇ 2013 ರಲ್ಲಿ ಸಿದ್ದರಾಮಯ್ಯ ಹೇಳಿದ್ದರು. ಆದರೆ, ನೀವು ಅಸೆಂಬ್ಲಿಯಲ್ಲಿ ಏನು ಮಾಡಿದ್ದಿರಿ ಎನ್ನುವುದು ಕ್ಷೇತ್ರದ ಜನರಿಗೆ ಗೊತ್ತಿದೆ ಎಂದು ಸಿ.ಸಿ. ಪಾಟೀಲ್ ಅವರನ್ನು ಇಬ್ರಾಹಿಂ ಕುಟುಕಿದರು.

ಸಿಎಂ ಸಿದ್ದರಾಮಯ್ಯ ಮತ್ತೆ ಪ್ರಮಾಣ ವಚನ ಸ್ವೀಕರಿಸುವುದು ಶತಸಿದ್ಧ ಎಂದು ಹೇಳಿ ಬಿಎಸ್‍ವೈ ಅವರಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು.  ಇದನ್ನೂ ಓದಿ: ಮೋದಿಯವರೇ ಗಂಡಸ್ತನ ಇದ್ದರೆ ಸಿದ್ದರಾಮಯ್ಯರ ಭ್ರಷ್ಟಾಚಾರ ಆರೋಪ ಸಾಬೀತುಪಡಿಸಿ: ಸಿ.ಎಂ.ಇಬ್ರಾಹಿಂ

Share This Article
Leave a Comment

Leave a Reply

Your email address will not be published. Required fields are marked *