ಸಿಎಂ ಬರೋದನ್ನೇ ಕಾದು ಕುಳಿತು ಮೋದಿ ಅಭಿಮಾನಿಗಳಿಂದ ತಿರುಗೇಟು!

Public TV
1 Min Read

ಉಡುಪಿ: ಕರಾವಳಿಯ ಜನ ಬಿಜೆಪಿಗೆ ವೋಟು ಹಾಕುತ್ತಾರೆ. ಅವರಿಗೆ ತಿಳುವಳಿಕೆ ಇಲ್ಲ. ಜೆಡಿಎಸ್‍ಗೆ ಮತ ಹಾಕಿದ್ರೆ ಅಭಿವೃದ್ಧಿ ಎಂದರೆ ಏನೂಂತ ತೋರಿಸ್ತೀವಿ ಎಂಬ ಸಿಎಂ ಕುಮಾರಸ್ವಾಮಿ ವಾರದ ಹಿಂದೆ ಹೇಳಿಕೆ ಕೊಟ್ಟಿದ್ದರು. ಇದಕ್ಕೆ ಮೋದಿ ಅಭಿಮಾನಿಗಳು ಉಡುಪಿಯಲ್ಲಿ ತಿರುಗೇಟು ನೀಡಿದ್ದಾರೆ.

ಸಿಎಂ ಬರುವುದನ್ನು ಕಾದು ಕುಳಿತು ಮೋದಿ.. ಮೋದಿ.. ಎಂದು ಕೂಗಿ ನಾಡದೊರೆಯನ್ನು ಜಿಲ್ಲೆಗೆ ಸ್ವಾಗತ ಮಾಡಿದ ಘಟನೆ ಉಡುಪಿಯ ತ್ರಾಸಿ ಸರ್ಕಲ್ ನಲ್ಲಿ ನಡೆದಿದೆ. ಉತ್ತರ ಕನ್ನಡದಿಂದ ಕೊಪ್ಪಕ್ಕೆ ಹೊರಟಿದ್ದ ಸಿಎಂ ಕಾರು ಉಡುಪಿಯ ತ್ರಾಸಿ ಬಳಿ ಬರುತ್ತಿತ್ತು. ಹೆದ್ದಾರಿಯಲ್ಲಿ ಸಿಎಂ ಕಾರು ಬರುತ್ತಿದ್ದಂತೆ ಪ್ರಧಾನಿ ಮೋದಿಗೆ ಜೈಕಾರ ಕೇಳಿಬಂದಿದೆ.

ಕರಾವಳಿಗರಿಗೆ ತಿಳುವಳಿಕೆ ಇಲ್ಲ ಎಂದಿದ್ದ ಸಿಎಂ ಕುಮಾರಸ್ವಾಮಿಗೆ ಈ ಮೂಲಕ ತಿರುಗೇಟು ನೀಡಲಾಗಿದೆ. ಸಿಎಂ ಹೇಳಿಕೆಯಿಂದ ಆಕ್ರೋಶಿತರಾಗಿರುವ ಬಿಜೆಪಿ ಕಾರ್ಯಕರ್ತರು, ಸಾಮಾಜಿಕ ಜಾಲತಾಣದಲ್ಲಿ ಸಮರ ಸಾರಿದ್ದರು. ಬುಧವಾರ ಕುಂದಾಪುರದಲ್ಲಿ ಸಿಎಂ ಕಾರ್ಯಕ್ರಮ ಸಂದರ್ಭ ಮೋದಿ ಜೈಕಾರಕ್ಕೆ ಸಿದ್ಧತೆ ಮಾಡಿದ್ದರು. ಪೊಲೀಸರು ಈ ಪ್ಲಾನ್ ನಿಷ್ಕ್ರಿಯಗೊಳಿಸಿದ್ದರು.

ಕಳೆದ ರಾತ್ರಿ ಸಿಎಂ ಕಾರವಾರದಿಂದ ಕೊಪ್ಪ ಹೋಗುವ ದಾರಿಯಲ್ಲಿ ಸೌಕೂರು ದೇವಸ್ಥಾನ ಭೇಟಿ ನೀಡಿದರು. ಈ ಸಂದರ್ಭ ಮೋದಿ.. ಮೋದಿ ಎಂದು ನೂರಾರು ಯುವಕರು ಜೈಕಾರ ಹಾಕಿದ್ದಾರೆ. ಹೆದ್ದಾರಿಯಲ್ಲಿ ಈ ಜೈಕಾರ ಸಿಎಂ ಕಿವಿಗೆ ಕೇಳಿಸ್ತೋ ಇಲ್ಲವೋ, ಯುವಕರು ಖುಷಿಪಟ್ಟಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *