ದೇಶ ದ್ರೋಹಿಗಳ ಹಿತ ಕಾಯುವ ಪೊಲೀಸ್ ಅಧಿಕಾರಿಗಳು ಪಾಕಿಸ್ತಾನಕ್ಕೆ ಹೋಗಲಿ: ಸುರೇಶ್ ಅಂಗಡಿ

Public TV
1 Min Read

ಬೆಳಗಾವಿ: ಪಾಕಿಸ್ತಾನ ಜಿಂದಾಬಾದ್ ಅನ್ನುವರನ್ನ ಗುಂಡಿಕ್ಕಿ ಕೊಲ್ಲಬೇಕು. ಗುಂಡಿಕ್ಕಿ ಕೊಲ್ಲಲು ಆಗದ ಪೊಲೀಸ್ ಅಧಿಕಾರಿಗಳು ಇಲ್ಲಿ ಇರೋದು ಬೇಡ. ದೇಶ ವಿರೋಧಿಗಳ ಹಿತ ಕಾಯುವ ಪೊಲೀಸ್ ಅಧಿಕಾರಿಗಳು ಬೇಕಾದ್ರೆ ಪಾಕಿಸ್ತಾನಕ್ಕೆ ಹೋಗಲಿ ಎಂದು ಬೆಳಗಾವಿ ಸಂಸದ ಸುರೇಶ ಅಂಗಡಿ ಕಿಡಿಕಾರಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮದುರ್ಗ ಮಾಜಿ ಶಾಸಕ ಅಶೋಕ ಪಟ್ಟಣ ಅವರ ಆಪ್ತ ಶಫಿ ಬೆಣ್ಣಿ ದೇಶ ವಿರೋಧಿ ಪೋಸ್ಟ್ ವಿಚಾರ ಪ್ರತಿಕ್ರಿಯಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದಾರೆ. ಒಂದು ಗಂಟೆಯಲ್ಲಿ ದೇಶ ವಿರೋಧಿ ಪೋಸ್ಟ್ ಹಾಕಿದವರನ್ನ ಪೊಲೀಸರು ಬಂಧಿಸಬೇಕು. ಇಲ್ಲವಾದಲ್ಲಿ ಬೆಳಗಾವಿ ಎಸ್ ಪಿ ವರ್ಗಾವಣೆ ಮಾಡಿಕ್ಕೊಂಡು ಹೋಗಬೇಕು. ಪೊಲೀಸರು ಕಾಂಗ್ರೆಸ್ ಕೈ ಗೊಂಬೆಯಾಗಿದ್ದಾರೆ ಎಂದು ಹರಿಹಾಯ್ದಿದ್ದಾರೆ. ಇದನ್ನೂ ಓದಿ:ಮಾಜಿ ಶಾಸಕನ ಬಲಗೈ ಬಂಟನಿಂದ ದೇಶದ್ರೋಹಿ ಪೋಸ್ಟ್

ಬಿಜೆಪಿ ಕಾರ್ಯಕರ್ತರು ಖಡ್ಗದಿಂದ ಕೇಕ್ ಕಟ್ ಮಾಡಿದರೆ ಸಾಕು ಅರೆಸ್ಟ್ ಮಾಡ್ತೀರಿ. ಕಾಂಗ್ರೆಸ್ ಮಾಜಿ ಶಾಸಕನ ಆಪ್ತ ಪಾಕಿಸ್ತಾನ ಜಿಂದಾಬಾದ್ ಅಂದರೂ ಅರೆಸ್ಟ್ ಮಾಡುತ್ತಿಲ್ಲ. ದೇಶ ದ್ರೋಹಿಗಳಿಗೆ ಬೆಂಬಲಿಸುವ ಪೊಲೀಸ್ ಅಧಿಕಾರಿಗಳು ಪಾಕಿಸ್ಥಾನಕ್ಕೆ ಹೋಗಲಿ, ಭಾರತದಲ್ಲಿ ಇರೋದು ಬೇಡ ಎಂದು ಬೆಳಗಾವಿ ಪೊಲೀಸ್ ವರಿಷ್ಠರ ಬಗ್ಗೆ ಸಂಸದ ಅಂಗಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *