ಸಚಿವರು, ಸರ್ಕಾರದ ಕಾರ್ಯವೈಖರಿ ಮೇಲೆ ಶಾಸಕರ ಸಿಟ್ಟು – ಖಡಕ್ ರಿಯಾಕ್ಷನ್ ಕೊಡ್ತಿದ್ದ ಡಿಸಿಎಂ ಸಾಫ್ಟ್?

Public TV
1 Min Read

ಬೆಂಗಳೂರು: ಸಚಿವರು ಹಾಗೂ ಸರ್ಕಾರದ ಕಾರ್ಯವೈಖರಿಯ ಮೇಲೆ ಕೆಲ ಶಾಸಕರು ಸಿಟ್ಟಿಗೆದ್ದಿದಾರೆ. ಹೀಗಿರುವಾಗ ಖಡಕ್ ರಿಯಾಕ್ಷನ್ ಕೊಡುತ್ತಿದ್ದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸೈಲೆಂಟ್ ಆಗಿಬಿಟ್ಟರಾ ಎಂಬ ಪ್ರಶ್ನೆಗಳು ಮೂಡಿವೆ.

ಶಾಸಕರು ಬಹಿರಂಗವಾಗಿಯೇ ಭ್ರಷ್ಟಾಚಾರದ ಚಾರ್ಜ್‌ಶೀಟ್‌ ಹಾಕುತ್ತಿದ್ದರೂ ಕೂಡ ಡಿಕೆಶಿ ಸಾಫ್ಟ್ ರಿಯಾಕ್ಷನ್ ಕೊಡುತ್ತಿದ್ದಾರೆ. ನಾನು ಏನು ಹೇಳಬೇಕೋ ಅದನ್ನು ಹೇಳಿದ್ದೀನಿ, ಸಿಎಂ, ಸಚಿವರು ನೋಡಿಕೊಳ್ಳುತ್ತಾರೆ ಎಂದಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್ ಲೂಟಿಕೋರರ ಸರ್ಕಾರ, ಮಾನ ಮರ್ಯಾದೆ ಇದ್ದರೆ ಸಿಎಂ, ಡಿಕೆಶಿ ರಾಜೀನಾಮೆ ಕೊಡಲಿ: ಛಲವಾದಿ ನಾರಾಯಣಸ್ವಾಮಿ

ಕೆಪಿಸಿಸಿ (KPCC) ಅಧ್ಯಕ್ಷರಾಗಿ ಡಿಸಿಎಂ ಡಿಕೆಶಿಗೆ ಬಹುದೊಡ್ಡ ಜವಾಬ್ದಾರಿ ಇಲ್ಲವಾ? ಶಾಸಕರ ಬಹಿರಂಗ ಹೇಳಿಕೆಗಳಿಗೆ ಬ್ರೇಕ್ ಹಾಕುವ ಬದಲು ಸೈಲೆಂಟ್ ನಡೆ ಯಾಕೆ? ಎಂಬ ಬಗ್ಗೆ ಕಾಂಗ್ರೆಸ್‌ನಲ್ಲಿ (Congress) ಆಂತರಿಕವಾಗಿ ಚರ್ಚೆಯಾಗುತ್ತಿದೆ.

ಇನ್ನೂ ಕೆಲ ಸಚಿವರ ವಿರುದ್ಧ ಕೆಲವು ಕಾಂಗ್ರೆಸ್ ಶಾಸಕರು ಆರೋಪ ಮಾಡುತ್ತಿದ್ದಾರೆ. ಸದ್ಯ ಸಿದ್ದರಾಮಯ್ಯ ಸರ್ಕಾರದ ಕೆಲ ಸಚಿವರ ಸುತ್ತ ಏಳು ಸುತ್ತಿನ ಕೋಟೆ ಇದೆಯಾ ಎಂಬ ಚರ್ಚೆ ಜೋರಾಗಿದ್ದು, ವಿರೋಧ ಪಕ್ಷದ ಶಾಸಕರಿಗೆ ಇರಲಿ, ಕಾಂಗ್ರೆಸ್ ಶಾಸಕರ ಕೈಗೆ ಕೆಲ ಸಚಿವರು ಸಿಗ್ತಿಲ್ಲ ಎಂಬ ಆರೋಪವೂ ಇದೆ.

ಕೆಲ ಸಚಿವರನ್ನ ಭೇಟಿಯಾಗಲು ಸಮಯ ಕೇಳಿದ್ರೆ ಟೈಂ ಕೊಡಲ್ಲ, ಸಮಸ್ಯೆಯನ್ನೂ ಕೇಳಲ್ಲ. ಹಾಗಾಗಿ ಶಾಸಕರ ಕೋಪ, ತಾಪ ನೆತ್ತಿಗೇರಿ ಕೆಲ ಸಚಿವರ ಮೇಲೆ ಕೆಂಡಾಮಂಡಲರಾಗಿದ್ದಾರೆ. ಈಗಾಗಲೇ ಸಿಎಂ, ಡಿಸಿಎಂ, ಹೈಕಮಾಂಡ್ ಗಮನಕ್ಕೂ ತಂದಿರುವ ಹಲವು ಶಾಸಕರು ಸಮಸ್ಯೆ ಪರಿಹಾರಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ ಈ ಹಿಂದೆ ಶಾಸಕಾಂಗ ಪಕ್ಷದ ಸಭೆಯಲ್ಲೂ ಸಚಿವರ ವಿರುದ್ಧ ಹಲವು ಶಾಸಕರು ಗುಟುರು ಹಾಕಿದ್ದಾರೆ.ಇದನ್ನೂ ಓದಿ: ಕಾಂಗ್ರೆಸ್‌ಗೆ ಕಮಿಷನ್ ಬಿಸಿ, ಹೈಕಮಾಂಡ್‌ಗೆ ತಲೆನೋವು – ಸಿಎಂ ಮಧ್ಯಪ್ರವೇಶ?

Share This Article