ವಿಧಾನಸೌಧದಲ್ಲಿ ಹೈಡ್ರಾಮಾ – ಜಾರ್ಜ್ ಕೊಠಡಿಯಲ್ಲಿ ಸುಧಾಕರ್ ಲಾಕ್

Public TV
1 Min Read

ಬೆಂಗಳೂರು: ಚಿಕ್ಕಬಳ್ಳಾಪುರ ಶಾಸಕ ಸ್ಪೀಕರ್ ಕಚೇರಿಗೆ ಆಗಮಿಸಿ ರಾಜೀನಾಮೆ ಪತ್ರ ನೀಡಿ ಹೊರಬರುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನು ಸುತ್ತುವರಿದು ಜಾರ್ಜ್ ಅವರ ಕೊಠಡಿಯಲ್ಲಿ ಲಾಕ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕರು ಜಾರ್ಜ್ ಕೊಠಡಿಯಲ್ಲಿ ಕುಳಿತು ಸುಧಾಕರ್ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಈ ವೇಳೆ ಸುಧಾಕರ್ ನನ್ನನ್ನು ಬಿಟ್ಟು ಬಿಡಿ ಪ್ಲೀಸ್, ನಾನು ರಾಜೀನಾಮೆ ವಾಪಸ್ ಪಡೆಯಲ್ಲ. ನನಗೆ ಸಾಕಾಗಿದೆ, ನಾನು ಎಲ್ಲವನ್ನೂ ಯೋಚಿಸಿಯೇ ರಾಜೀನಾಮೆ ಕೊಟ್ಟಿದ್ದೇನೆ ಎಂದು ಕಾಂಗ್ರೆಸ್ ನಾಯಕರಲ್ಲಿ ಕೇಳಿಕೊಂಡಿದ್ದಾರೆ.

ಈ ವೇಳೆ ಕಾಂಗ್ರೆಸ್ ನಾಯಕರು, ಏಯ್ ಸುಧಾಕರ್, ಸ್ವಲ್ಪ ಹೇಳುವುದನ್ನು ಕೇಳಿಸಿಕೋ. ಮುಂದೆ ಎಲ್ಲವೂ ಕೂಡ ಒಳ್ಳೆಯದಾಗುತ್ತೆ. ಅಲ್ಲದೆ ನೀನು ಮಂತ್ರಿ ಕೂಡ ಆಗುತ್ತೀಯಾ ಎಂದು ಹೇಳಿ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸುಧಾಕರ್ ನಾಯಕರ ಮಾತನ್ನು ಒಪ್ಪಲು ಸಿದ್ಧವಿಲ್ಲದಂತೆ ಕಾಣುತ್ತಿದೆ.

ಸುಧಾಕರ್ ಅವರು ತಮ್ಮ ಮಾತನ್ನು ಒಪ್ಪದೆ ಇರುವ ಕಾರಣ ಅವರನ್ನು ಈಗ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದರು. ಆದರೆ ಅಷ್ಟರಲ್ಲೇ ಸುಧಾಕರ್ ಅವರ ಮನವೊಲಿಸಲು ಸಿದ್ದರಾಮಯ್ಯ ವಿಧಾನಸೌಧಕ್ಕೆ ಆಗಮಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *