ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ – ಶ್ರೀರಾಮುಲು ಗಂಭೀರ ಆರೋಪ

Public TV
1 Min Read

ಹುಬ್ಬಳ್ಳಿ: ಕುಂದಗೋಳ ಉಪಚುನಾವಣಾ ಕಣದಲ್ಲಿ ಸಾವಿನ ರಾಜಕೀಯ ಶುರುವಾಗಿದ್ದು, ಸಚಿವ ಸಿಎಸ್ ಶಿವಳ್ಳಿ ಸಾವಿಗೆ ಮೈತ್ರಿ ಸರ್ಕಾರವೇ ಕಾರಣ. ಅವರ ಕಿರುಕುಳದಿಂದಲೇ ಶಿವಳ್ಳಿ ಅವರು ಮೃತಪಟ್ಟಿದ್ದಾರೆ ಎಂದು ಶಾಸಕ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ.

ಹುಬ್ಬಳ್ಳಿಯ ಬೆಟದೂರು ಗ್ರಾಮದಲ್ಲಿ ಮಾತನಾಡಿದ ಅವರು, ಸಚಿವ ಶಿವಳ್ಳಿ ಅವರು ಈಗ ನಮ್ಮ ನಡುವೆ ಇಲ್ಲ. ಅವರ ಸಾವಿಗೆ ಕಾಂಗ್ರೆಸ್ ಹಾಗೂ ಮೈತ್ರಿ ಸರ್ಕಾರವೇ ಕಾರಣವಾಗಿದೆ. ಮೈತ್ರಿ ಸರ್ಕಾರದ ಕಿರುಕುಳದಿಂದಲೇ ಸಚಿವರು ಮೃತಟ್ಟಿದ್ದಾರೆ. ಆದರೆ ಕುಂದಗೋಳ ಜನರಿಗೆ ಸೇಡು ತಿರುಸಿಕೊಳ್ಳುವ ಸಮಯ ಬಂದಿದೆ ಎಂದು ಹೇಳಿದರು.

ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಅವರು ಮತ್ತೊಮ್ಮೆ ಸಿಎಂ ಆಗಬೇಕು. ಅವರು ರೈತರಿಗಾಗಿ ಬಹಳ ವರ್ಷಗಳಿಂದ ಹೋರಾಟ ಮಾಡಿದ್ದು, ನಮ್ಮ ಜೀವ ಹೋದರೂ ಬಿಎಸ್‍ವೈ ಸಿಎಂ ಆಗಬೇಕು. ಮುಂದೆ ಅವರಿಗೆ ವಯಸ್ಸು ಸಹಕರಿಸುವುದಿಲ್ಲವಾದ ಕಾರಣ ಈ ಬಾರಿಯೇ ಅವರು ಮುಖ್ಯಮಂತ್ರಿ ಆಗಬೇಕು ಎಂದರು.

ಬಿಎಸ್‍ವೈ ಅವರಿಗೆ ನಾಟಕ ಮಾಡುವುದು ಗೊತ್ತಿಲ್ಲ. ಅವರಿಗೆ ಸ್ವಲ್ಪವೇ ಸಿಡುಕು ಸ್ವಭಾವವಿದೆ ಅಷ್ಟೇ. ನಾನು ಎಂದು ಯಡಿಯೂರಪ್ಪ ಬಗ್ಗೆ ಮಾತನಾಡಿಲ್ಲ. ಈ ಹಿಂದೆ ಬಿಎಸ್‍ವೈ ಬಳಿಕ ಜಗದೀಶ ಶೆಟ್ಟರ್ ಸಿಎಂ ಆಗಬೇಕು ಎಂದು ಬಯಸಿದ್ದೆ. ರಾಜಕೀಯ ಅಸ್ತಿತ್ವದ ಪ್ರಶ್ನೆಯಿಂದ ಪಾರ್ಟಿ ಮಾಡಿದ್ದೆ ಅಷ್ಟೇ ಎಂದರು.

Share This Article
Leave a Comment

Leave a Reply

Your email address will not be published. Required fields are marked *