ಶಾಸಕ ನಾರಾಯಣಸ್ವಾಮಿ ಒಬ್ಬ ಭೂಗಳ್ಳ: ಮುನಿಸ್ವಾಮಿ ಆರೋಪ

Public TV
1 Min Read

ಕೋಲಾರ: ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣ (S N Narayanaswamy) ಸ್ವಾಮಿಯೇ ಭೂ ಗಳ್ಳ ಎಂದು ಕೋಲಾರ ಸಂಸದ ಮುನಿಸ್ವಾಮಿ ಗಂಭೀರ ಆರೋಪ ಮಾಡಿದರು.

ಕೊಲಾರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಹಂಚಾಳ ಬಳಿ ಗಾಲ್ಫ್ ಕೋರ್ಸ್ ನಲ್ಲಿ ಅಂದಿನ ದಿವಂಗತ ಜಿಲ್ಲಾಧಿಕಾರಿ ಡಿ.ಕೆ.ರವಿ ಇದ್ದಾಗ 50 ಎಕರೆ ಕಾಂಪೌಂಡ್ ಹಾಕಿದ್ರು. ಎಸ್.ಎನ್.ಸಿಟಿ ಯಲ್ಲಿ ತಾಯಿ ಹೆಸರಲ್ಲಿ ಭೂ ಮಂಜೂರಾತಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸೇನಾ ಸಿಬ್ಬಂದಿಯ ಕೈಗಳನ್ನು ಕಟ್ಟಿ ಹಾಕಿ ಥಳಿಸಿ, ಬೆನ್ನಿನಲ್ಲಿ PFI ಅಂತಾ ಬರೆದ ಕಿಡಿಗೇಡಿಗಳು

ಸರ್ಕಾರಿ ಜಮೀನುಗಳನ್ನ ಅವರ ಸಂಬಂಧಿಕರ ಹೆಸರಲ್ಲಿ ಮಂಜೂರು ಮಾಡಿಸಿಕೊಂಡಿದ್ದಾರೆ. ಅಕ್ರಮ ಮಂಜೂರಾತಿ ಸೇರಿದಂತೆ ಹಲವು ಪ್ರಕರಣಗಳು ಅವರ ವಿರುದ್ಧ ಇದೆ. ಯಾರಾದರೂ ಒಬ್ಬ ಶಾಸಕನ ಮೇಲೆ ಹೆಚ್ಚು ಪ್ರಕರಣ ಇದ್ರೆ ಅದು ಎಸ್.ಎನ್.ನಾರಾಯಣಸ್ವಾಮಿ ಮೇಲೆ. ಶಾಸಕ ನಾರಾಯಣಸ್ವಾಮಿ ಒಡೆತನದ ಎಸ್.ಎನ್.ಸಿಟಿಗೆ ದಾರಿ ಮಾಡಿಕೊಂಡಿರುವ ಸರ್ಕಾರಿ ಗುಂಡಿ ತೋಪು ತೆರವುಗೊಳಿಸಿದಾಗ ಸರ್ಕಾರದ ಮೇಲೆ ವಿಶ್ವಾಸ ಬರಲಿದೆ.

ನಮ್ಮದೇ ಸರ್ಕಾರ ಇದ್ದಾಗ ಅವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದೇವೆ. ವಾಚ್ ಮೆನ್ ಆಗಿ ಅವರು ಯಾವತ್ತೋ ಕೆಲಸ ಮಾಡಬೇಕಿತ್ತು. ಅವರಪ್ಪನ ಆಸ್ತಿಗೆ ನಾನು ಯಾವತ್ತೂ ಹೋಗಿಲ್ಲ ವಾಚ್‍ಮೆನ್ ಕೆಲಸ ನನಗೆ ಅಲ್ಲ. ಸರ್ಕಾರಿ ಜಮೀನು ಉಳಿಸಿ ಸರ್ಕಾರಕ್ಕೆ ವಾಚ್‍ಮೆನ್ ಆಗಿ ಎಂದು ಸಲಹೆ ನೀಡಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್