ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರ ಗೂಂಡಾಗಿರಿ!

Public TV
1 Min Read

ಮಂಡ್ಯ: ಕೆಆರ್ ಎಸ್ ಡ್ಯಾಂ ಯಾರ ತಾತನೂ ಕಟ್ಟಿದ್ದಲ್ಲ, ಒಳಹೋಗ್ಬೇಡಿ ಅನ್ನೋ ಹಕ್ಕು ನಿನಗಿಲ್ಲ ಎಂದು ಮಹಿಳಾ ಪೊಲೀಸ್ ಪೇದೆಗೆ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಅವಾಜ್ ಹಾಕಿರುವ ಘಟನೆ ಶ್ರೀರಂಗಪಟ್ಟಣದಲ್ಲಿ ನಡೆದಿದೆ.

ನೀರಿನ ಪ್ರಮಾಣ ಹೆಚ್ಚಾಗಿರುವ ಕಾರಣ ಶ್ರೀರಂಗಪಟ್ಟಣದಲ್ಲಿರುವ ಕೆಆರ್ ಎಸ್ ಬೃಂದಾವನ ಪ್ರವೇಶಕ್ಕೆ ತಡೆ ನೀಡಲಾಗಿತ್ತು. ಸಾರ್ವಜನಿರಕರಿಗೆ ಯಾವುದೇ ಅಪಾಯ ಸಂಭವಿಸದೇ ಇರಲು ಮುನ್ನೆಚ್ಚರಿಕೆಯ ಕ್ರಮವಾಗಿ ನಿಷೇಧ ಮಾಡಲಾಗಿತ್ತು. ಈ ವೇಳೆ ಸಾರ್ವಜನಿಕರು ಪ್ರವೇಶ ಮಾಡದಂತೆ ಸ್ಥಳದಲ್ಲಿ ಮಹಿಳಾ ಪೇದೆಯನ್ನು ನಿಯೋಜಿಸಲಾಗಿತ್ತು. ಈ ವೇಳೆ ಸ್ಥಳಕ್ಕೆ ಬಂದ ಶಾಸಕರ ಬೆಂಬಲಿಗರು ಬೃಂದಾವನ ಪ್ರವೇಶ ಮಾಡಲು ಮುಂದಾಗಿದ್ದರು, ಇದನ್ನು ತಡೆದ ಕರ್ತವ್ಯ ನಿರತ ಮಹಿಳಾ ಪೇದೆ ಮೇಲೆ ಅವಾಜ್ ಹಾಕಿದ್ದಾರೆ.

ಮಹಿಳಾ ಪೇದೆಗೆ ರೌಡಿ ಹಾಗೇ ನಡೆದುಕೊಳ್ಳುತ್ತೀಯಾ, ಈ ಡ್ಯಾಂ ಯಾರ ತಾತನೂ ಕಟ್ಟಿದ್ದಲ್ಲ, ಒಳಹೋಗ್ಬೇಡಿ ಎನ್ನಲು ನಿನಗೆ ಹಕ್ಕು ನೀಡಿಲ್ಲ. ನಾವು ಪ್ರವೇಶ ಮಾಡುತ್ತೇವೆ ಅದ್ಯಾರನ್ನ ಕರೆಸುತ್ತೀಯಾ ಕರೆಸು ಎಂದು ಬ್ಯಾರಿಕೇಡನ್ನು ಬದಿಗೆ ತಳ್ಳಿ ಗುಂಡಾವರ್ತನೆ ನಡೆಸಿದ್ದಾರೆ. ಸದ್ಯ ಪೊಲೀಸ್ ಪೇದೆ ಮೇಲೆ ಶಾಸಕರ ಬೆಂಬಲಿಗರು ನಡೆಸಿದ ಗುಂಡಾವರ್ತನೆ ದೃಶ್ಯಗಳು ಸ್ಥಳದಲ್ಲಿದ್ದ ಪ್ರವಾಸಿಗರ ಮೊಬೈಲ್‍ನಲ್ಲಿ ಸೆರೆಯಾಗಿದೆ.

Share This Article
1 Comment

Leave a Reply

Your email address will not be published. Required fields are marked *