ಹೊನ್ನಾ ನಾಯಕ ಮಾತಿಗೆ ತೀವ್ರ ಅಸಮಾಧಾನ- ಸಭೆ ಮಧ್ಯದಲ್ಲೇ ಹೊರಟು ಹೋದ ಶಾಸಕ

Public TV
1 Min Read

ಬೀದರ್: ಕಾಂಗ್ರೆಸ್ (Congress) ನಾಯಕ ಬಾಬು ಹೊನ್ನಾ (Babu Honna Naik) ಮಾತಿಗೆ ತೀವ್ರ ಅಸಮಾಧಾನಗೊಂಡು ಬಸವಕಲ್ಯಾಣ ಶಾಸಕ ಶರಣು ಸಲಗರ್ (Sharanu Salagar) ಸಭೆ ಮಧ್ಯದಿಂದಲೇ ಹೊರಟು ಹೋದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾಮೂನಾಯಕ್ ತಾಂಡದಲ್ಲಿ ನಡೆದಿದೆ.

ನೀವು ಶಾಸಕರಾದ ಬಳಿಕ ಕ್ಷೇತ್ರದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದ್ದು, ನಿಮ್ಮ ಸಲುವಾಗಿ ನಾವು ಸಹೋದರರು ಜಗಳವಾಡುತ್ತಿದ್ದೇವೆ. ಇಂತಹ ಸಂಸ್ಕೃತಿಯನ್ನು ಯಾವ ಶಾಸಕರೂ ಮಾಡಿಲ್ಲ. ಈ ರೀತಿ ಮಾಡುವುದು ತಪ್ಪು ಶಾಸಕರೇ ಎಂದು ಬಾಬು ಹೊನ್ನಾ ನಾಯಕ ಕಿಡಿಕಾರಿದ್ದರು. ಇದನ್ನೂ ಓದಿ: ಡಿಕೆಶಿ ಮದ್ದೂರು ಕ್ಷೇತ್ರದಿಂದ ಸ್ಪರ್ಧೆ ಹಿಂದಿದೆ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್!

ನಾಯಕನ ಮಾತಿನಿಂದ ಅಸಮಾಧಾನಗೊಂಡ ಶಾಸಕರು ವೇದಿಕೆಯಿಂದ ಇಳಿದು ಹೊರಟು ಹೋದರು. ಈ ವೇಳೆ ಈ ಬಾರಿ ಶಾಸಕರು ಹೋಗುವವರಿದ್ದಾರೆ. ಹೋಗಲಿ ಬಿಡಿ, ಇಂತಹವರು ಏನು ಮಾಡುತ್ತಾರೆ ಎಂದು ಬಾಬು ಹೊನ್ನಾ ನಾಯಕ ಶಾಸಕರಿಗೆ ಟಾಂಗ್ ನೀಡಿದರು.

ಹಾಮೂ ನಾಯಕ ತಾಂಡದಲ್ಲಿ ನಡೆದ ಹಾಮೂಲಾಲ್ ಜಾತ್ರಾ ಮಹೋತ್ಸವ ಧರ್ಮ ಸಭೆಯಲ್ಲಿ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಕಾಂಗ್ರೆಸ್ ನಾಯಕಿ ಮಾಲಾ ಬಿ ನಾರಾಯಣರಾವ್ ಸೇರಿದಂತೆ ವಿವಿಧ ಸ್ವಾಮೀಜಿಗಳು ಹಾಗೂ ಸಾವಿರಾರು ಜನರು ಭಾಗಿಯಾಗಿದ್ದರು. ಇದನ್ನೂ ಓದಿ: ಕುಕ್ಕರ್ ಪಾಲಿಟಿಕ್ಸ್ – ಮತದಾರರಿಗೆ ಗಿಫ್ಟ್ ಹಂಚಿದ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *