ಧಮ್ ಇದ್ರೆ ಬಾರಲೇ ಶ್ರೀನಾಥ್- ಪರಿಷತ್ ಮಾಜಿ ಸದಸ್ಯರ ವಿರುದ್ಧ ಶಾಸಕ ಇಕ್ಬಾಲ್ ಅನ್ಸಾರಿ ವಾಗ್ದಾಳಿ

Public TV
1 Min Read

ಕೊಪ್ಪಳ: ವಿಧಾನ ಪರಿಷತ್ ಮಾಜಿ ಸದಸ್ಯ ಎಚ್ ಆರ್ ಶ್ರೀನಾಥ್ ವಿರುದ್ಧ ಶಾಸಕ ಇಕ್ಬಾಲ್ ಅನ್ಸಾರಿ ಅವಾಚ್ಯ ಶಬ್ದದಿಂದ ವಾಗ್ದಾಳಿ ನಡೆಸಿದ್ದಾರೆ. ಧಮ್ ಇದ್ರೆ ಬಾರಲೇ ಶ್ರೀನಾಥ್ ಅಂತ ಬಹಿರಂಗವಾಗಿ ಅವಾಜ್ ಹಾಕಿದ್ದಾರೆ.

ಕೊಪ್ಪಳದ ಗಂಗಾವತಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಶಾಸಕ ಇಕ್ಬಾಲ್ ಅನ್ಸಾರಿ, ರಾಜಕೀಯದಲ್ಲಿ ಶ್ರೀನಾಥ್ ಬಚ್ಚಾ ಅಂತ ಪುನರುಚ್ಛರಿಸಿದ್ದಾರೆ. ನಿನಗೆ ಧಮ್ ಇದ್ರೆ ಬಾರಲೇ ಶ್ರೀನಾಥ್. ಕಾಂಗ್ರೆಸ್ ಪಕ್ಷದಲ್ಲಿ ಎಚ್.ಆರ್ ಶ್ರೀನಾಥ್ ಮತ್ತು ಎಚ್. ಜಿ.ರಾಮುಲು ನಾಲಾಯಕ್‍ಗಳು. ಲೇ ಬೇಕೂಫ್ ನೀನು ತೋಳೆರಿಸಿದ್ರೆ ನಾನೂ ತೋಳೆರೆಸ್ತೀನಿ. ನೀನು ಲಕ್ಷ ಪ್ರೆಸ್ ಮೀಟ್ ಮಾಡಿ, ನನ್ನ ವಿರುದ್ಧ ಮಾತನಾಡಿದ್ರೆ, ನಾನು ಲಕ್ಷದ ಮೇಲೆ ಒಂದು ಪ್ರೆಸ್ ಮೀಟ್ ಮಾಡಿ ನಿನ್ನ ಬಂಡವಾಳ ಬಯಲು ಮಾಡ್ತೀನಿ. ಧಮ್ ಇದ್ರೆ ನನ್ನ ಮನೆ ಮುಂದೆ ಬಂದು ಪ್ರೆಸ್ ಮೀಟ್ ಮಾಡು ಎಂದು ಶ್ರೀನಾಥ್‍ಗೆ ಪಂಥಾಹ್ವಾನ ನೀಡಿದ್ದಾರೆ.

ಅಷ್ಟೇ ಅಲ್ಲ ನೀನು ಎಲ್ಲಿಗೆ ಹೇಳುತ್ತಿಯೋ ಅಲ್ಲಿಗೆ ಬರ್ತಿನಿ ಅಂತಾ ಎಚ್. ಆರ್. ಶ್ರೀನಾಥ್ ವಿರುದ್ಧ ಅವಾಚ್ಯ ಶಬ್ಧ ಬಳಕೆ ಮಾಡಿದ್ರು. ಸುಮಾರು 1 ಗಂಟೆ ಸುದ್ದಿಗೋಷ್ಠಿ ನಡೆಸಿದ ಶಾಸಕ ಅನ್ಸಾರಿ, ಸುದ್ದಿಗೋಷ್ಠಿಯುದ್ದಕ್ಕೂ ಲೇ ಮಗನೇ ಶ್ರೀನಾಥ ಎಂದೇ ಸಂಬೋಧಿಸಿ ವಾಗ್ದಾಳಿ ನಡೆಸಿದರು.

Share This Article
Leave a Comment

Leave a Reply

Your email address will not be published. Required fields are marked *